ಪ್ರಜಾಸ್ತ್ರ ಕ್ರೀಡಾ ಸುದ್ದಿ
ಮೊಹಾಲಿ: 200 ರನ್ ಗಳ ಗಡಿ ದಾಟಿಯೂ ಲಖ್ನೋ ವಿರುದ್ಧ ಆರ್ ಸಿಬಿ ಸೋಲು ಅನುಭಿಸಿತು. ನಂತರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೇವಲ 8 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಹೀಗಾಗಿ 5 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 3ರಲ್ಲಿ ಸೋಲು ಕಂಡಿದೆ. ಇಂದು ಮಧ್ಯಾಹ್ನ ಪಂಜಾಬ್ ವಿರುದ್ಧ ನಡೆಯುವ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನ ಟ್ರ್ಯಾಕ್ ಗೆ ಮರಳುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ವಿರಾಟ್ ಕೊಹ್ಲಿ, ಫಾಫ್ ಡುಪ್ಲಸಿ, ಗ್ಲೇನ್ ಮ್ಯಾಕ್ಸ್ ವೆಲ್ ಅಬ್ಬರದ ಆಟವಾಡುತ್ತಿದ್ದು, ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದಾರೆ. ಆದರೆ, ಕೆಲವೊಮ್ಮೆ ಬೌಲರ್ ಗಳು ದುಬಾರಿಯಾಗಿ ತಂಡದ ಗೆಲುವು ತಪ್ಪಿಸಲಾಗುತ್ತಿದೆ. ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಪಂಜಾಬ್, 8ನೇ ಸ್ಥಾನದಲ್ಲಿರುವ ಆರ್ ಸಿಬಿ ಹಣಾಹಣಿ ಹೇಗಿರುತ್ತೆ ಅನ್ನೋ ಕುತೂಹಲ ಮೂಡಿದೆ.
ಪಂಜಾಬಿನಲ್ಲಿ ನಾಯಕ ಶಿಖರ್ ಧವನ್, ರಾಜಪಕ್ಷ, ಅತ್ವಿರ್ ಟೈಡೆ, ಹರ್ ಪ್ರೀತ್ ಸಿಂಗ್ ಭಾಟಿಯಾ, ಶಾರುಖ್ ಖಾನ್ ಮೇಲೆ ನಿರೀಕ್ಷೆಯಿದೆ. ಬೌಲಿಂಗ್ ನಲ್ಲಿ ಸ್ಯಾಮ್ ಕರನ್, ಸಿಂಕದರ್ ರಾಜ್, ಅರ್ಸದೀಪ್ ಸಿಂಗ್, ಲಿವಿಂಗಸ್ಟನ್ ಮೇಲೆ ಹೆಚ್ಚು ಭರವಸೆ ಇಟ್ಟುಕೊಳ್ಳಲಾಗಿದೆ. ಮಧ್ಯಾಹ್ನ 3.30ಕ್ಕೆ ಪಂದ್ಯ ಶುರುವಾಗಲಿದೆ.