ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಈರುಳ್ಳಿ ಬೆಲೆ ಮತ್ತೆ ಗಗನಕ್ಕೆ ಏರಿದೆ. ಇದ್ರಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಕೆಜಿಗೆ 70 ರೂಪಾಯಿ ಮಾರಾಟವಾಗ್ತಿದ್ದ ಈರುಳ್ಳಿ ಇದೀಗ 110 ರೂಪಾಯಿಗೆ ಮಾರಾಟವಾಗ್ತಿದೆ. ಹೀಗಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳ್ತಿದೆ.
ಹೋಲ್ ಸೇಲ್ ನಲ್ಲಿಯೇ 90 ರೂಪಾಯಿಗೆ ಮಾರಾಟವಾಗ್ತಿದ್ದು, ನಗರ ಭಾಗದಲ್ಲಿ 120, ಗ್ರಾಮಣ ಭಾಗದಲ್ಲಿ 110ಕ್ಕೆ ಮಾರಲಾಗ್ತಿದೆ. ಇದ್ರಿಂದಾಗಿ ಜನರು ಈರುಳ್ಳಿ ಖರೀದಿಸಬೇಕಾ ಬೇಡ್ವಾ ಅನ್ನೋ ಚಿಂತೆಯಲ್ಲಿದ್ರೆ, ರೈತರ ಬಳಿ ಈರುಳ್ಳಿ ಇಲ್ಲದೆ ಹೋಗಿರುವುದು ಅವರಿಗೊಂದು ಚಿಂತೆಯಾಗಿದೆ.
ಎಲ್ಲೆಡೆ ಭರ್ಜರಿ ಮಳೆಯಾಗ್ತಿರುವುದ್ರಿಂದ ಪ್ರವಾಹ ಉಂಟಾಗಿದೆ. ಹೀಗಾಗಿ ರೈತರು ಬೆಳೆದ ಈರುಳ್ಳಿ ನೀರು ಪಾಲಾಗಿದೆ. ಇದ್ರಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಆಮದು ಕಡಿಮೆಯಾಗಿದೆ. ಇದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಿದ್ದು ಕೆಜಿಗೆ 110-120 ಕೊಟ್ಟು ಖರೀದಿಸಬೇಕಾದ ಪರಿಸ್ಥಿತಿ ಬಂದಿದೆ.