ಅಂಗಾಂಗ ದಾನ ಸಾರ್ಥಕ ಕಾರ್ಯ: ಸಿಎಂ ಬೊಮ್ಮಾಯಿ

134

ಪ್ರಜಾಸ್ತ್ರ ಸದ್ದಿ

ಬೆಂಗಳೂರು: ಅಂಗಾಂಗ ದಾನ ಮಾಡುವುದು ಮಾನವೀತೆಯ ಕಾರ್ಯ. ಇದರಿಂದ ಸಾವಿನ ನಂತರವೂ ಮತ್ತೊಬ್ಬರಿಗೆ ಬದುಕು ನೀಡುವ ಸಾರ್ಥಕ ಸೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ವಿಶ್ವ ಅಂಗಾಂಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ಒಬ್ಬ ವ್ಯಕ್ತಿ ತನ್ನ ಅಂಗಾಂಗ ದಾನದ ಮೂಲಕ 8 ಜನರ ಜೀವ ಉಳಿಸಬಹುದು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವನು ಸಾಧಕ ಎಂದರು.

ರಾಜ್ಯದಲ್ಲಿ ಪ್ರಸ್ತುತ 18 ಅಂಗಾಂಗ ಮರುಪಡೆಯುವಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದು ಸರ್ಕಾರದ ದೊಡ್ಡ ಸಾಧನೆ. ನಿಮಾನ್ಸ್ ನಲ್ಲಿ ಮೆದುಳು ದಾನ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೂತ್ರಪಿಂಡ ದಾನ ನೀಡಬಹುದಾಗಿದೆ ಎಂದು ಇದೆ ವೇಳೆ ತಿಳಿಸಿದರು.




Leave a Reply

Your email address will not be published. Required fields are marked *

error: Content is protected !!