ಭೂಮಿ ಪೂಜೆಗೆ ಬಂದ ಶಾಸಕರ ಎದುರು ನಿವಾಸಿಗಳ ಆಕ್ರೋಶ

468

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ವಾರ್ಡ್ ನಂಬರ್ 6ರ ಶಂಕರ ಬಡಾವಣೆಯಲ್ಲಿ ಉದ್ಯಾನವನ ಅಭಿವೃದ್ಧಿ ಪಡೆಸುವ ಕಾಮಗಾರಿಯ ಭೂಮಿ ಪೂಜೆಗೆ ಬಂದ ಶಾಸಕ ರಮೇಶ ಭೂಸನೂರ ಹಾಗೂ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರಿಗೆ, ಜನರು ಮೊದಲು ನಮಗೆ ಕುಡಿಯಲು ನೀರು ಕೊಡಿ ಎಂದು ಕೇಳಿಕೊಂಡರು.

ನಮಗೆ ಸರಿಯಾಗಿ ಕುಡಿಯಲು ನೀರಿಲ್ಲ. 15 ದಿನಕ್ಕೊಮ್ಮೆ ನೀರು ಬರುತ್ತೆ. ಅದು ಸಹ ಸರಿಯಾಗಿ ಬರಲ್ಲ. ಇದರಿಂದಾಗಿ ನಮಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಹಲವು ಬಾರಿ ಮನವಿ ಮಾಡಿದರು ಯಾರೂ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಶೌಚಾಲಯ ಸಮಸ್ಯೆಯೂ ಸಾಕಷ್ಟಿದೆ ಎಂದು ಮಹಿಳೆಯರು ಸಮಸ್ಯೆಗಳ ಸರಮಾಲೆಯನ್ನು ಶಾಸಕರು ಎದುರು ಹೇಳಿದರು.

ಒಂದು ತಿಂಗಳಲ್ಲಿ ಮೂರು ಮಂದಿ ಮುಖ್ಯಾಧಿಕಾರಿಗಳು ಬದಲಾದರು. ಅವರು ಬ್ಯಾಂಕ್ ಅಕೌಂಟ್ ಬದಲಾಗಬೇಕು. ಸಹಿ ಬೇಕು ಎಂದು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅವರು ಹೇಳಿದರು. ಹೀಗೆಯಾದರೆ ಕುಡಿಯುವ ನೀರಿಗೆ ಏನು ಮಾಡಬೇಕು ಎಂದು ನಿವಾಸಿಗಳು ಪ್ರಶ್ನಿಸಿದಾಗ, ನಾಳೆಯಿಂದ ನೀರು ಶುರು ಮಾಡಲಾಗುತ್ತೆ ಎಂದರು.




Leave a Reply

Your email address will not be published. Required fields are marked *

error: Content is protected !!