ಪ್ರಜಾಸ್ತ್ರ ಸುದ್ದಿ
ಮುಂಬೈ: ಮಹಾರಾಷ್ಟ್ರ ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟು ಇನ್ನು ಮುಂದುವರೆದಿದೆ. ಇದರ ನಡುವೆ ನಾಳೆ ಬಹುಮತ ಸಾಬೀತು ಪಡಿಸಲು ಸಿಎಂ ಉದ್ದವ್ ಠಾಕ್ರೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಹೀಗಾಗಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಗೋವಾಕ್ಕೆ ಶಿಫ್ಟ್ ಆಗುತ್ತಿದ್ದಾರೆ.
ಗುಹಾಟಿಯಿಂದ ಗೋವಾಗೆ ಬಂಡಾಯ ಶಾಸಕರು ಪಯಣ ಬೆಳಸಲಿದ್ದಾರೆ. ಅವರಿಗಾಗಿ ತಾಜ್ ಕನ್ವೆನ್ಷನ್ ಹೋಟೆಲ್ ನಲ್ಲಿ 70 ರೂಮ್ ಗಳನ್ನು ಬುಕ್ ಮಾಡಲಾಗಿದೆ. ಇದರ ನಡುವೆ ಮುಂಬೈನ ತಾಜ್ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಬಿಜೆಪಿ ತನ್ನ ಶಾಸಕರ ಸಭೆ ಕರೆದಿದೆ.