ಪ್ರಜಾಸ್ತ್ರ ಸುದ್ದಿ
ಬಹುಭಾಷಾ ನಟಿ, ರಾಜಕಾರಣಿ ಜಯಪ್ರದಾ ವಿರುದ್ಧದ ಪ್ರಕರಣ ಸಂಬಂಧ ಉತ್ತರ ಪ್ರದೇಶದ ರಾಂಪುರ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. ಜನವರಿ 10ರೊಳಗೆ ಕೋರ್ಟ್ ಗೆ ಒಪ್ಪಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಪೊಲೀಸರು ಅವರ ಮನೆಗೆ ಹೋದಾಗ ಅವರ ನಾಪತ್ತೆಯಾದ ಸುದ್ದಿ ಬೆಳಕಿಗೆ ಬಂದಿದೆ.
ನಟಿ, ರಾಜ್ಯಸಭಾ ಬಿಜೆಪಿ ಸದಸ್ಯೆ ಜಯಪ್ರದಾ ಎಲ್ಲಿಗೆ ಹೋದರು? ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರಾ? ಕೋರ್ಟ್ ಗೆ ಹಾಜರಾಗಿ ಈ ಎಲ್ಲ ಸಂಕಷ್ಟಗಳಿಂದ ತಪ್ಪಿಸಿಕೊಳ್ಳಲಿಲ್ಲವೇಕೆ ಎನ್ನುವ ಪ್ರಶ್ನೆ ಎದ್ದಿದೆ. ದೆಹಲಿ ಪೊಲೀಸರ ಸಹಾಯದಿಂದ ಉತ್ತರ ಪ್ರದೇಶದ ಪೊಲೀಸರು ಜಯಪ್ರದಾ ಹುಡುಕಾಟ ನಡೆಸಿದ್ದಾರೆ.
ಏನಿದು ಘಟನೆ?
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಯಪ್ರದಾ ಯುಪಿಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದರು. ಈ ವೇಳೆ ಚುನಾವಣೆಯ ನಿಯಮಗಳನ್ನು ಉಲ್ಲಂಘಿಸಿದ್ದಾರಂತೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಇದುವರೆಗೂ ಒಮ್ಮೆಯೂ ಕೋರ್ಟ್ ಗೆ ಹಾಜರಾಗಿಲ್ಲ. ಆಗ ನವೆಂಬರ್ 17ರಂದು ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.
ಇಷ್ಟಾದರೂ ಜಯಪ್ರದಾ ನ್ಯಾಯಾಲಯಕ್ಕೆ ಬಂದಿಲ್ಲ. ಇಷ್ಟು ಕಾಲ ಕೋರ್ಟ್ ಸಮಯ ವ್ಯರ್ಥ ಮಾಡಿದ ಕಾರಣಕ್ಕೆ ಜನವರಿ 10ರೊಳಗೆ ಅವರ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.