ಲಕ್ನೋ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ದೇ, ಅನೇಕ ಕಡೆ ಹಿಂಸಾಚಾರ ನಡೆದು ಸಾವು ನೋವು ಸಂಭವಿಸಿವೆ. ಉತ್ತರ ಪ್ರದೇಶದಲ್ಲಿ ಇಂದು ಮತ್ತಷ್ಟು ಹಿಂಸಾಚಾರ ನಡೆಯುವ ಸಾಧ್ಯತೆಯಿದ್ದು, ಇಂಟರ್ ನೆಟ್ ಸೇವೆಯನ್ನ ಬಂದ್ ಮಾಡಲಾಗಿದೆ.
ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪ್ರತಿಭಟನೆ ನಡೆಯಬಹುದು ಅನ್ನೋ ಕಾರಣಕ್ಕೆ, ಅಲಿಘರ್, ಆಗ್ರಾ, ಮುಜಾಫರ್ ನಗರ, ಸಾಂಬಾಲ್, ಕಾನ್ಪೂರ್, ಬಿಜ್ನೋರ್, ಬುಲಂದ್ ಶಹರ್, ಘಾಜಿಯಾಬಾದ್, ಫಿರೋಜಾಬಾದ್ ಹಾಗೂ ಶಾಮ್ಲಿ ಜಿಲ್ಲೆಗಳಲ್ಲಿ ಇಂಟರ್ ಸೇವೆಯನ್ನ ಬಂದ್ ಮಾಡಲಾಗಿದೆ.
ಉತ್ತರ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ರು ಹೆಚ್ಚಿನ ಭದ್ರತೆಯನ್ನ ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದ್ದು, ಯಾವುದೇ ರೀತಿಯ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.