ಪ್ರಜಾಸ್ತ್ರ ಸುದ್ದಿ
ಮೈಸೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಮೃತಪಟ್ಟಿರುವುದಕ್ಕೆ ಅನುವಂಶೀಯ ಕಾರಣ ಎಂದು, ಜಯದೇಯ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ. ಪುನೀತ್ ಸಹೋದರರಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರಿಗೂ ಹೃದಯ ಸಂಬಂಧಿ ತೊಂದರೆಗಳಾಗಿವೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಹೃದ್ರೋಗ ಸಮಸ್ಯೆ ಸಂಬಂಧದ ಮಾಧ್ಯಮ ಸಂವಾದದಲ್ಲಿ ಈ ರೀತಿ ಹೇಳಿದರು. ನಮ್ಮ ದೇಶದಲ್ಲಿ ಶೇಕಡ 50ರಷ್ಟು ಸಾವು ಹೃದಯಾಘಾತ, ಹೃದಯ ಸಂಬಂಧಿ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ನಂತಹ ರೋಗಗಳಿಂದ ಎಂದಿದ್ದಾರೆ.
ಮೊದಲು ಮಕ್ಕಳು ವಯಸ್ಸಾದ ತಂದೆ, ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ, ಈಗ ಹೆತ್ತವರೆ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಸ್ಥಿತಿ ಇದೆ. ಭಾರತದಲ್ಲಿ ಶೇಕಡ 50ರಷ್ಟು ಯುವ ಜನತೆ ಹೃದ್ರೋಗಕ್ಕೆ ಧೂಮಪಾನ ಕಾರಣ. ಇನ್ನು ಕೆಲವರಿಗೆ ಅನುವಂಶೀಯ ಕಾರಣಕ್ಕೆ ಮೃತಪಡುತ್ತಿದ್ದಾರೆ ಅಂತಾ ಹೇಳಿದರು.