ಮತದಾನ ಕಾರ್ಯಕ್ಕೆ ಅಡ್ಡಿಯಾದ ವರುಣ

109

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲ ಗಂಟೆಗಳಷ್ಟೆ ಬಾಕಿ ಉಳಿದಿದೆ. ಮೇ 10, ಬುಧವಾರ ಮುಂಜಾನೆ ಮತದಾನ ನಡೆಯಲಿದೆ. ಹೀಗಾಗಿ ಎಲ್ಲಡೆ ಸಿಬ್ಬಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇಂದು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಸಿಬ್ಬಂದಿಯನ್ನು ಹೈರಾಣು ಮಾಡಿದೆ.

ಬೃಹತ್ ಮರವೊಂದು ಹಾಕಿದ್ದ ಟೆಂಟ್ ಮೇಲೆ ಬಿದ್ದ ಘಟನೆ ಜಿಲ್ಲೆಯ ಆಳಂದ ಪಟ್ಟಣದ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ. ಹೀಗಾಗಿ ಟೆಂಟ್ ಎಲ್ಲ ಬಿದ್ದು ಹೋಗಿದೆ. ಅನೇಕ ಕುರ್ಚಿಗಳು ಮುರಿದು ಹೋಗಿವೆ. ಜೊತೆಗೆ ವಿದ್ಯುತ್ ಹೋಗಿ ಸಿಬ್ಬಂದಿ, ಅಧಿಕಾರಿಗಳು ಪರದಾಡುವಂತಾಯಿತು.




Leave a Reply

Your email address will not be published. Required fields are marked *

error: Content is protected !!