ತಾಳಿಕೋಟೆಯಲ್ಲಿ ಆಣೆಕಲ್ಲು ಮಳೆ

460

ತಾಳಿಕೋಟೆ: ಪಟ್ಟಣದಲ್ಲಿ  ಇಂದು ಭರ್ಜರಿ ಮಳೆಯಾಗಿದೆ. ಬಿರುಗಾಳಿ ಸಮೇತ ಸುರಿದ ಭರ್ಜರಿ ಮಳೆಗೆ ಆಣೆಕಲ್ಲು ಸಹ ಬಿದ್ದಿವೆ. ಈ ಮೂಲಕ ಪಟ್ಟಣದ ಜನತೆಗೆ ವರುಣದೇವ ತಂಪೆರೆಯುವ ಜೊತೆಗೆ ಒಂದಿಷ್ಟು ಹಾನಿ ಸಹ ಮಾಡಿದ್ದಾನೆ.

ಭರ್ಜರಿ ಮಳೆ ಹಾಗೂ ಬಿರುಗಾಳಿ ಆರ್ಭಟಕ್ಕೆ ಅನೇಕ ಕಡೆ ಮರಗಳು ಬುಡ ಸಹಿತ ನೆಲಕ್ಕುರುಳಿವೆ. ಮನೆಯ ಮೇಲಿನ ಸಿಂಟೆಕ್ಸ್, ಅಂಗಡಿ-ಮನೆಗಳ ಮೇಲಿನ ತಗಡುಗಳು ಹಾರಿ ಹೋಗಿವೆ. ಇನ್ನು ಕೆಲವು ಕಡೆ ಮನೆಯ ಕಿಟಕಿಗಳಿಗೂ ಹಾನಿಯಾಗಿದೆ. ಇನ್ನು ಆಣೆಕಲ್ಲು ಬಿದ್ದ ರಭಸಕ್ಕೆ ಸೋಲಾರ್ ಗಳು ಹಾನಿಯಾಗಿವೆ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಹಲವೆಡೆ ಮರಗಳು ಬಿದ್ದಿವೆ. ಕೆಲವು ಕಡೆ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದಿದ್ದು ಹೆಸ್ಕಾಂ ಸಿಬ್ಬಂದಿ ಸರಿಪಡಿಸಲು ಹರಸಾಹ ಪಡುವಂತಾಗಿದೆ. ಒಟ್ಟಿನಲ್ಲಿ ಇಂದು ಸುರಿದ ಮಳೆಯಿಂದಾಗಿ ಜನರಿಗೆ ಒಂದಿಷ್ಟು ಖುಷಿ ಒಂದಿಷ್ಟು ಬೇಸರವಾಗಿದೆ.




Leave a Reply

Your email address will not be published. Required fields are marked *

error: Content is protected !!