ಪ್ರಜಾಸ್ತ್ರ ಸುದ್ದಿ
ಬೀದರ: ಹಿಂದೂ ಧರ್ಮ, ರಾಮ ಎಂದು ಹೇಳುವ ಬಿಜೆಪಿ ಶಾಸಕರಿಂದಲೇ ರಾಮನಿಗೆ ಅವಮಾನ ಮಾಡಲಾಗಿದೆ. ಅದು ರಾಮನವಮಿ ಸಂದರ್ಭದಲ್ಲಿಯೇ ಬಿಜೆಪಿ ಶಾಸಕ ಶರಣು ಸಲಗಾರ ರಾಮನಿಗೆ ಅವಮಾನ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ. ರಾಮಭಕ್ತರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ರಾಮನವಮಿ ಶೋಭಾಯಾತ್ರೆಯ ವೇಳೆ ಬಿಜೆಪಿ ಶಾಸಕ ಶರಣು ಸಲಗಾರ, ರಾಮನ ಬೃಹತ್ ಮೂರ್ತಿಗೆ ಹಾರ ಹಾಕುವ ಸಂದರ್ಭದಲ್ಲಿ ರಾಮನ ತೊಡೆಯ ಮೇಲೆ ನಿಂತುಕೊಂಡಿದ್ದಾರೆ. ಈ ಮೂಲಕ ಮಹಾಯಡವಟ್ಟು ಮಾಡಿಕೊಂಡಿದ್ದಾರೆ. ಪ್ರಚಾರದ ಭರಾಟೆಯಲ್ಲಿ ಶಾಸಕರಿಂದಲೇ ಇಂತಹದೊಂದು ಘಟನೆ ನಡೆದಿದೆ.
ಈ ಕುರಿತು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಕಿಡಿ ಕಾರಿದ್ದಾರೆ. ಇದೀಗ ಶಾಸಕರ ವಿರುದ್ಧ ಎಲ್ಲಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.