ಪ್ರಜಾಸ್ತ್ರ ಕ್ರೀಡಾ ಸುದ್ದಿ
ಐಪಿಎಲ್ ಟೂರ್ನಿಯ ಸೋಮವಾರ ಸಂಜೆಯ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ನಡೆಯಿತು. ಆರ್ ಸಿಬಿ 18 ರನ್ ಗಳ ಅಂತರದಿಂದ ಗೆಲುವು ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 126 ರನ್ ಗಳಿಸಿತ್ತು. ಲಖನೌ ಸ್ಪಿನ್ನರ್ ಗಳು ಆರ್ ಸಿಬಿ ಬ್ಯಾಟರ್ ಗಳನ್ನು ಕಟ್ಟಿ ಹಾಕಿದರು. ತುಂಬಾ ಸಾಧಾರಣ ಗುರಿ ಮುಟ್ಟಲು ಬಂದ ಲಖನೌ ಆಟಗಾರರಿಗೆ ಬೆಂಗಳೂರು ಬೌಲರ್ ಗಳು ತಿರುಗೇಟು ನೀಡಿದ ಪರಿಣಾಮ 108 ರನ್ ಗಳಿಗೆ ಕೆ.ಎಲ್ ರಾಹುಲ್ ಪಡೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು.
ಏಪ್ರಿಲ್ 10ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಖನೌ ಒಂದು ವಿಕೆಟ್ ಅಂತರದಿಂದ ರೋಚಕ ಗೆಲುವು ಸಾಧಿಸಿತು. ಈ ವೇಳೆ ಲಖನೌ ತಂಡದ ಮೆಂಟರ್ ಗೌತಮ್ ಗಂಭೀರ್, ಆರ್ ಸಿಬಿ ಅಭಿಮಾನಿಗಳನ್ನು ಟಾರ್ಗೆಟ್ ಮಾಡಿ ಬಾಯಿ ಮುಚ್ಕೊಂಡು ಇರಬೇಕು ಅನ್ನೋ ರೀತಿ ಸನ್ನೆ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಎಂಬಂತೆ ಸೋಮವಾರ ಸಂಜೆಯ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಕ್ಯಾಚ್ ಹಿಡಿದ ಕೊಹ್ಲಿ ಪ್ರೇಕ್ಷಕರ ಗ್ಯಾಲರಿಯತ್ತ ಮುಖ ಮಾಡಿ ಬಾಯಿ ಮುಚ್ಕೊಂಡು ಇರಬೇಡಿ ಎನ್ನುವ ರೀತಿಯಲ್ಲಿ ಸನ್ನೆ ಮಾಡಿದರು. ಇದರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡಿಂಗ್ ನಲ್ಲಿದೆ. ನಟ ದರ್ಶನ್ ನಟನೆಯ ಕ್ರಾಂತಿ ಚಿತ್ರದ ಡೈಲಾಗ್ ರೀತಿಯಲ್ಲಿ ಕರ್ಮ ನಿಮ್ಮನ್ನು ಬಿಟ್ರು ಕೊಹ್ಲಿ ನಿಮ್ಮನ್ನು ಬಿಡಲ್ಲ ಅನ್ನೋ ಬರಹ ಸಖತ್ ವೈರಲ್ ಆಗಿದೆ. ಇನ್ನು ಪಂದ್ಯ ಮುಗಿದ ಬಳಿಕ ಕೊಹ್ಲಿ ಹಾಗೂ ಗಂಭೀರ ನಡುವೆ ಮಾತಿನ ಚಕಮಕಿ ನಡೆದಿದ್ದು ಸಹ ವೈರಲ್ ಆಗಿದೆ.