ಪುಷ್ಪ ಸಿನಿಮಾ ಶೈಲಿಯಲ್ಲಿ ರಕ್ತಚಂದನ ಸಾಗಾಟ

339

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಅಪರಾಧ ಕೃತ್ಯವನ್ನೇ ಹೀರೋಯಿಸಂ ಎಂದು ತೋರಿಸಿರುವ ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಈ ಸಿನಿಮಾದಲ್ಲಿ ಹೀರೋ ತನ್ನ ಬುದ್ಧಿವಂತಿಕೆಯಿಂದ ಬೆಲೆಬಾಳುವ ರಕ್ತಚಂದನವನ್ನು ಹೇಗೆ ಸಾಗಿಸುತ್ತಾನೆ ಹಾಗೂ ಆ ಮಾಫಿಯಾವನ್ನು ಹೇಗೆ ತನ್ನ ಕೈಗೆ ತೆಗೆದುಕೊಳ್ಳುತ್ತಾನೆ ಅನ್ನೋದು ಇದೆ.

ಈ ಸಿನಿಮಾದ ರೀತಿಯಲ್ಲೇ ರಕ್ತಚಂದನ ಸಾಗಿಸುವಾಗ ಸಿಕ್ಕಿಬಿದ್ದ ಘಟನೆ ನಡೆದಿದೆ. ಟಾಟಾ ಏಸ್ ವಾಹನದಲ್ಲಿ ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ತರಕಾರಿ ಬಾಕ್ಸ್ ಹಾಕಿದ್ದಾರೆ. ಅದರ ಕೆಳಗೆ ರಕ್ತಚಂದನ ತುಂಡುಗಳನ್ನು ಇಡಲಾಗಿದೆ. ಇದನ್ನು ತಿಳಿದು ಆಂಧ್ರ ಭಾಗದಿಂದ ಕಟ್ಟಿಗೇನಹಳ್ಳಿಯವರೆಗೂ ಪೊಲೀಸರು ಬೆನ್ನು ಹತ್ತಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ವೇಳೆ ವಾಹನ ಚಾಲಕ ಅಡ್ಡಾದಿಡ್ಡಿ ಗಾಡಿ ಓಡಿಸಿ ಎಮ್ಮೆಗೆ ಗುದ್ದಿದ್ದಾನೆ. ಈ ವೇಳ ವಶಕ್ಕೆ ಪಡೆದು ವಾಹನ ಪರಿಶೀಲನೆ ನಡೆಸಿದಾಗ 497 ಕೆ.ಜಿ ಮರದ ತುಂಡು ಹಾಗೂ 61.7 ಕೆಜಿ ಸಣ್ಣ ಚಕ್ಕೆಗಳು ಸಿಕ್ಕಿವೆ. ಇದರ ಮೌಲ್ಯ 28 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!