ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದ ಸಂಜು ವೆಡ್ಸ್ ಗೀತಾ ಚಿತ್ರ 2011ರಲ್ಲಿ ತೆರೆ ಕಂಡು ಬಿಗ್ ಸಕ್ಸಸ್ ಪಡೆಯಿತು. ನಟ ಶ್ರೀನಗರ ಕಿಟ್ಟಿ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜೊತೆಯಾಗಿ ಕಾಣಿಸಿಕೊಂಡಿದ್ದರು. ಚಿತ್ರಕಥೆ ಹಾಗೂ ಶ್ರೀನಗರ ಕಿಟ್ಟಿ, ರಮ್ಯಾ ನಟನೆಗೆ ಎಲ್ಲರೂ ಬೋಲ್ಡ್ ಆಗಿದ್ದರು.
ಇದೀಗ 12 ವರ್ಷಗಳ ಬಳಿಕ ಸಂಜು ವೆಡ್ಸ್ ಗೀತಾ-2 ಚಿತ್ರ ಸಿದ್ಧವಾಗುತ್ತಿದೆ. ಆದರೆ, ರಮ್ಯಾ ಜಾಗದಲ್ಲಿ ನಟಿ ರಚಿತಾ ರಾಮ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಶ್ರೀನಗರ ಕಿಟ್ಟಿ ಜೊತೆಗೆ ಮೊದಲ ಬಾರಿಗೆ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ನಾಗಶೇಖರ್ ಈ ಆಯ್ಕೆ ಯಾಕೆ ಅನ್ನೋ ಕುತೂಹಲವಿದೆ. ನಟಿ ರಚಿತಾ ರಾಮ್ ಸಹ ಸ್ಕ್ರಿಪ್ಟ್ ಕೇಳಿ ಮೆಚ್ಚಿಕೊಂಡಿದ್ದಾರಂತೆ.
ಇನ್ನು ಬಹುಭಾಷಾ ನಟ ಪ್ರಕಾಶ್ ರಾಜ್, ರಮ್ಯಾ ಕೃಷ್ಣ ಅವರನ್ನು ಪ್ರಮುಖ ಪಾತ್ರಗಳಿಗೆ, ನಟಿ ತಮನ್ನಾ ಭಾಟಿಯಾ ಅವರನ್ನು ವಿಶೇಷ ಪಾತ್ರಕ್ಕಾಗಿ ನಿರ್ದೇಶಕ ನಾಗಶೇಖರ್ ಸಂಪರ್ಕಿಸುತ್ತಿದ್ದಾರಂತೆ. ಸಿನಿ ಪ್ರಿಯರು ಮತ್ತೊಂದು ಒಳ್ಳೆಯ ಪ್ರೀತಿಯ ಸಿನಿಮಾ ನೋಡಲು ಕಾಯುತ್ತಿದ್ದಾರೆ.
120ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಮಿಡಿಯನ್ ಆಗಿ ನಟಿಸಿದ ನಾಗಶೇಖರ್ ನಿರ್ದೇಶನಕ್ಕೂ ಬಂದರು. 2011ರಲ್ಲಿ ಸಂಜು ವೆಡ್ಸ್ ಗೀತಾ ಅನ್ನೋ ಸಕ್ಸಸ್ ಸಿನಿಮಾ ನೀಡಿದರು. 2013ರಲ್ಲಿ ಮೈನಾ ಅಂತಾ ಮತ್ತೊಂದು ಸೂಪರ್ ಹಿಟ್ ಮೂವಿ ನೀಡಿದರು. 2019ರಲ್ಲಿ ಅಮರ ಸಿನಿಮಾ ಮಾಡಿದರು. ಮುಂದೆ ನಿರ್ದೇಶನ ಕಡಿಮೆ ಮಾಡಿ ಹಲವು ಚಿತ್ರಗಳಲ್ಲಿ ನಾಯಕ, ಲೀಡ್ ರೋಲ್ ಗಳಲ್ಲಿ ಕಾಣಿಸಿಕೊಂಡರು. ಈಗ ಮರಳಿ ಆಕ್ಷನ್ ಕಟ್ ಹೇಳಲು ಸಿದ್ಧವಾಗಿದ್ದು, ಸ್ಯಾಂಡಲ್ ವುಡ್ ಅಂಗಳದಲ್ಲಿ ಮತ್ತೊಂದು ಸಕ್ಸಸ್ ಫುಲ್ ಮೂವಿ ನೀಡಲಿ ಅನ್ನೋದು ಎಲ್ಲರ ಆಶಯ.