ಬೆಂಗಳೂರು: ಹಿರಿಯ ನಟ, ರಾಜಕಾರಣಿ ದಿವಂಗತ ಅಂಬರೀಶ ಅವರ ಮೊದಲ ಪುಣ್ಯತಿಥಿ ನಡೆಯಿತು. ನಗರದ ಕಂಠೀರ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಭೇಟಿ ನೀಡಿದ ಪತ್ನಿ ಸುಮಲತಾ ಅಂಬರೀಶ, ಮಗ ಅಭಿಷೇಕ, ಬಂಧು ಬಳಗದವರು ಸೇರಿ ಪೂಜೆ ಸಲ್ಲಿಸಿದ್ರು.
ಈ ವೇಳೆ ಮಾತ್ನಾಡಿದ ಪತ್ನಿ ಸುಮಲತಾ ಅಂಬರೀಶ ಅವರು, ಒಂದು ವರ್ಷ ಎಷ್ಟು ಬೇಗ ಕಳಿದಿದೆ. ಎಲ್ಲೇ ಹೋದರೂ ಅವರ ನೆನಪು ಮರಕಳಿಸುತ್ತೆ. ನಾವಿಂದು ಹೀಗಿರಲು ಅವರ ಮಾರ್ಗದರ್ಶನ, ಅವರು ಹಾಕಿಕೊಟ್ಟ ದಾರಿಯೇ ಕಾರಣವೆಂದು ಹೇಳಿದ್ರು. ಇನ್ನು ಇದೇ ಸಂದರ್ಭದಲ್ಲಿ ಅಂಬಿಯ ಅಪಾರ ಅಭಿಮಾನಿಗಳು ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ರು.
ಒಂದನೇ ಪುಣ್ಯತಿಥಿ ಅಂಗವಾಗಿ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲಿ ಅವರ ಸಂಬಂಧಿಕರು, ಕಲಾವಿದರು, ಅಭಿಮಾನಿಗಳು ಭಾಗವಹಿಸಿದ್ದಾರೆ.