ಯಡಿಯೂರಪ್ಪಗೆ ಅರಳು ಮರುಳು: ಸಿದ್ದರಾಮಯ್ಯ

134

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ನೀರಾವರಿ ಯೋಜನೆಯ ಟೆಂಡರ್ ನಲ್ಲಿ ಅಕ್ರಮ ನಡೆದಿದೆ. ತರಾತುರಿಯಲ್ಲಿ ಟೆಂಡರ್ ಕರೆದಿದ್ದು ಅಕ್ರಮ ನಡೆದಿದೆ ಎಂದು ಗೂಳಿಹಟ್ಟಿ ಶೇಖರ್ ಪತ್ರ ಬರೆದಿದ್ದಾರೆ. ಹಣ ತೆಗೆದುಕೊಳ್ಳುವುದನ್ನು ಫೋಟೋ ತೆಗೆದು ತೋರಿಸಬೇಕಾ? ಯಡಿಯೂರಪ್ಪಗೆ ವಯಸ್ಸಿನಿಂದಾಗಿ ಅರಳು ಮರುಳಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆ ಮಾಡಲಿ. ನಮ್ಮ ಆಡಳಿತದಲ್ಲಿ ಬಿಜೆಪಿಯವರು ಏನು ಕಡ್ಲೇಪುರಿ ತಿಂತಿದ್ರಾ ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೇ, ಅಲ್ಪಾವಧಿಯಲ್ಲಿ ಟೆಂಡರ್ ನೀಡುತ್ತಿರುವ ಉದ್ದೇಶವೇನು? ಹಣ ಕೊಟ್ಟವರಿಗೆ ಮಾತ್ರ ಬಿಲ್ ಮಂಜೂರು ಮಾಡುತ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!