ವಿರೋಧ ಪಕ್ಷಗಳನ್ನು ಮೆಟ್ಟಿ ಮೇಲೆ ಬರುತ್ತೇವೆ: ಶಿವಾನಂದ ಪಾಟೀಲ

200

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಎಲ್ಲ ಜಾತಿ, ಪಂಗಡಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ ಜೆಡಿಎಸ್. ಹೀಗಾಗಿ ನಾನು ಈ ಪಕ್ಷವನ್ನು ಸೇರಿಕೊಂಡೆ. ನನ್ನನ್ನು ನಂಬಿ ಕುಮಾರಸ್ವಾಮಿ ಅವರು 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯೆಂದು ಘೋಷಿಸಿದ್ದಾರೆ. ಅವರಿಗೆ ಹಾಗೂ ಕ್ಷೇತ್ರದ ಜನತೆಗೆ ಧನ್ಯವಾದಗಳು ಎಂದು ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜಾಳ ಹೇಳಿದರು.

ಭಾನುವಾರ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸೇನೆಯಲ್ಲಿ ಸೇವೆ ಸಲ್ಲಿಸಿದಂತೆ ತಾಲೂಕಿನಲ್ಲಿಯೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಪಕ್ಷ ತೊರೆದು ಹೋದವರ ಮನವೊಲಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ಈಗಾಗ್ಲೇ 15-20 ತಂಡಗಳನ್ನು ರಚನೆ ಮಾಡಿದ್ದು ತಳಮಟ್ಟದಿಂದ ಕೆಲಸ ಮಾಡುತ್ತಿದ್ದಾರೆ. ಜನತೆ ಆಶೀರ್ವಾದಿಸಿಬೇಕು. ವಿರೋಧ ಪಕ್ಷಗಳನ್ನು ಮೆಟ್ಟಿ ಮೇಲೆ ಬರುತ್ತೇವೆ ಎಂದರು.

ಈ ವೇಳೆ ಮಹಾಂತೇಶ ಪಾರಗೊಂಡ, ಪ್ರಕಾಶ ಪಾಟೀಲ, ದಾವಲಸಾಬ್ ಗುತ್ತರಗಿ, ರಾಜು ಬಡಗೇರ, ಮಂಜುನಾಥ ಯಂಕಂಚಿ, ಸಮೀರ್ ತಾಂಬೋಳಿ, ಅರುಣ ಪಾಟೀಲ, ಸಂತೋಷ ಸಿರಗನಹಳ್ಳಿ, ನಾಗೇಶ ಪೂಜಾರಿ, ಅಪ್ಪುಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!