ಪ್ರಜಾಸ್ತ್ರ ಸುದ್ದಿ
ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆಯ ಅಂಚೆ ಮತ ಎಣಿಕೆ ಶುರುವಾಗಿದೆ. ಈಗಾಗ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಇದೆ ರೀತಿ ಜಿಲ್ಲೆಯಲ್ಲಿ ಸಹ ಈ ಎರಡು ಪಕ್ಷಗಳ ನಡುವೆ ಜಿದ್ದಾಜಿದ್ದಿ ಕೂಡಿದೆ.
ವಿಜಯಪುರ ನಗರದಲ್ಲಿ ಬಿಜೆಪಿಯ ಯತ್ನಾಳ, ಬಬಲೇಶ್ವರದಲ್ಲಿ ಕಾಂಗ್ರೆಸ್ ನ ಎಂ.ಬಿ ಪಾಟೀಲ, ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ನ ಶಿವಾನಂದ ಪಾಟೀಲ, ಇಂಡಿಯಲ್ಲಿ ಕಾಂಗ್ರೆಸ್ ನ ಯಶವಂತರಾಯಗೌಡ, ಸಿಂದಗಿಯಲ್ಲಿ ಬಿಜೆಪಿಯ ರಮೇಶ ಭೂಸನೂರ, ದೇವರ ಹಿಪ್ಪರಗಿಯಲ್ಲಿ ಜೆಡಿಎಸ್ ನ ರಾಜುಗೌಡ, ಮುದ್ದೇಬಿಹಾಳದಲ್ಲಿ ಬಿಜೆಪಿಯ ಎ.ಎಸ್ ಪಾಟೀಲ ನಡಹಳ್ಳಿ ಮುನ್ನಡೆ ಸಾಧಿಸಿದ್ದಾರೆ.