ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ವಿವೇಕಾನಂದ ಸರ್ಕಲ್ ನಿಂದ ಬಸವೇಶ್ವರ ಸರ್ಕಲ್ ವರೆಗಿನ ಡಿವೈಡರ್ ಗೆ ಗ್ರಿಲ್ ಅಳವಡಿಸುವ ಕೆಲಸ ನಡೆದಿದೆ. ಆದರೆ, ಸರಿಯಾಗಿ ಕೆಲಸ ಮಾಡದ ಪರಿಣಾಮ ಗ್ರಿಲ್ ಅಳವಡಿಸಿದ ಎರಡು ದಿನಗಳಲ್ಲಿ ಬಿದ್ದಿವೆ.
ನಮ್ಮ ಇಂಜಿನಿಯರ್ ಜೊತೆ ಮಾತನಾಡುತ್ತೇನೆ. ಅದೇನಾಗಿದೆ ಅನ್ನೋದು ನೋಡಿ ಸರಿಪಡಿಸಲು ಹೇಳುತ್ತೇನೆ.
ರಾಜಶ್ರೀ ತುಂಗಳ, ಪುರಸಭೆ ಮುಖ್ಯಾಧಿಕಾರಿ, ಸಿಂದಗಿ
ವಿವೇಕಾಂನದ ಸರ್ಕಲ್ ಹತ್ತಿರ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ. ಆದರೆ, ಅದಕ್ಕೆ ಬೇಕಾದ ದುರಸ್ಥಿ ಕೆಲಸ ಮಾಡದೆ ಬಿಟ್ಟ ಪರಿಣಾಮ ದನಗಳ ಹಾವಳಿಯಿಂದ ಬಿದ್ದು ಹೋಗಿವೆ. ಈ ರಸ್ತೆಯಲ್ಲಿ ವಾಹನ ಸಂಚಾರ ಸಾಕಷ್ಟು ಇದೆ. ಭಾನುವಾರದ ಸಂತೆ ಬೇರೆ ನಡೆಯುತ್ತಿದೆ. ಇದರಿಂದ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.