ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಶಾಂತಿ ಸುವ್ಯವಸ್ಥೆಯಿದೆ. ಇಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ಕಂಟ್ರೋಲ್ ಗೆ ಬಂದಿದೆ ಅಂತಾ ಮಮತಾ ಸರ್ಕಾರ ಕೇಂದ್ರಕ್ಕೆ ತಿಳಿಸಿದೆ. ಬಂಗಾಳದಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಕೇಳಿದ ವರದಿಗೆ ಬಂಗಾಳ ಸರ್ಕಾರ ಈ ರೀತಿ ಉತ್ತರಿಸಿದೆ.
ಪಶ್ಚಿಮ ಬಂಗಾಳ ನೆಲದಲ್ಲಿ ನಿಲ್ಲದ ಹಿಂಸಾಚಾರದಿಂದ ಇಡೀ ರಾಜ್ಯದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ. ಕಳೆದೊಂದು ವಾರದಲ್ಲಿ ಬಿಜೆಪಿ ಹಾಗೂ ಟಿಎಂಸಿ ಪಕ್ಷಗಳ ಕಾರ್ಯಕರ್ತರ ನಡುವಿನ ಗುದ್ದಾಟ ಹೆಚ್ಚಾಗಿದೆ. ಹೀಗಾಗಿ ಬಿಜೆಪಿಯ ಮೂವರು ಹಾಗೂ ಟಿಎಂಸಿಯ ಓರ್ವ ಕಾರ್ಯಕರ್ತ ಸಾವನ್ನಪ್ಪಿದ್ದಾನೆ.
ಬಸಿರಾತ್ ನಗರದ ನಾರ್ಥ್ 24 ಪರಿಗಣದಲ್ಲಿ ಹೆಚ್ಚಿನ ಹಿಂಸಾಚಾರ ನಡೆದಿದೆ. ಇದೊಂದು ರೀತಿಯ ರಾಜಕೀಯ ವಿವಾದ ಅಂತಾ ಟಿಎಂಸಿ ಹೇಳಿದೆ. ಲೋಕಸಭಾ ಚುನಾವಣೆ ಟೈಂನಲ್ಲಿ ಹೊತ್ತಿಕೊಂಡ ಬಿಜೆಪಿ ಹಾಗೂ ಟಿಎಂಸಿ ನಡುವಿನ ಕಿಡಿ ಆರುವ ಬದ್ಲು ಇನ್ನಷ್ಟು ಹೆಚ್ಚಿಗೆ ಉರಿಯುತ್ತಿರುವುದು ಬಂಗಾಳದ ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ.