ತುಂಗಾ ನದಿಯಲ್ಲಿ ಸಿಲುಕಿಕೊಂಡ ಕುಟುಂಬ ರಕ್ಷಣೆ

214

ಪ್ರಜಾಸ್ತ್ರ ಸುದ್ದಿ

ಶೃಂಗೇರಿ: ಚಿಕ್ಕಮಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಒಂದಿಷ್ಟು ಮಳೆಯಾಗುತ್ತಿದೆ. ಹೀಗಾಗಿ ಭದ್ರಾ, ತುಂಗಾ ನದಿಯ ಹರಿವು ಹೆಚ್ಚಾಗುತ್ತಿದೆ. ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ಕುಟುಂಬವೊಂದು ತುಂಗಾ ನದಿಯಲ್ಲಿ ಸಿಲುಕಿಕೊಂಡಿತ್ತು. ಅವರನ್ನು ರಕ್ಷಣೆ ಮಾಡಲಾಗಿದೆ.

ಶಾರದಾಂಬ ದೇವಾಲಯದ ಹತ್ತಿರದ ತುಂಗಾ ನದಿಯ ನಡುಗಡ್ಡೆಗೆ ಒಂದೇ ಕುಟುಂಬದ ಮೂವರು ಹೋಗಿದ್ದರು. ಮಳೆಯಿಂದಾಗಿ ದಿಢೀರ್ ನೀರಿನ ಪ್ರಮಾಣ ಹೆಚ್ಚಾಗಿ ಸಿಲುಕಿಕೊಂಡಿದ್ದರು. ಇದನ್ನು ನೋಡಿದ ಸ್ಥಳೀಯರು 112ಕ್ಕೆ ಕರೆ ಮಾಡಿ ರಕ್ಷಣೆಗೆ ಕೋರಿದ್ದರು.

ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಮೂವರನ್ನು ರಕ್ಷಣೆ ಮಾಡಲಾಗಿದೆ. ಇವರು ಮೂಲತಃ ಆಂಧ್ರಪ್ರದೇಶದವರೆಂದು ತಿಳಿದು ಬಂದಿದೆ. ಕಳೆದ ಕೆಲ ವರ್ಷಗಳಿಂದ ಶೃಂಗೇರಿಯಲ್ಲಿಯೇ ನೆಲೆಸಿದ್ದಾರಂತೆ.




Leave a Reply

Your email address will not be published. Required fields are marked *

error: Content is protected !!