ಉದಯಪುರ ಹೀನ ಕೃತ್ಯ: ರಾಷ್ಟ್ರಾದ್ಯಂತ ಖಂಡನೆ

200

ಪ್ರಜಾಸ್ತ್ರ ಸುದ್ದಿ

ಜೈಪುರ್: ಉದಯಪುರದ ಧನ್ ಮಂಡಿ ಪ್ರದೇಶದ ಟ್ರೇಲರ್ ಕನ್ಹಯ್ಯ ಲಾಲ್ ಎಂಬುವರನ್ನು ದುಷ್ಕರ್ಮಿಗಳಿಬ್ಬರು ಧರ್ಮದ ಹೆಸರಿನಲ್ಲಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಇದಕ್ಕೆ ಎಲ್ಲಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ನೀಚ ಕೃತ್ಯವೆಸಗಿದ ರಫಿಕ್ ಮೊಹಮ್ಮದ್ ಹಾಗೂ ಅಬ್ದುಲ್ ಜಬ್ಬರ್ ಅನ್ನೋ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದವರಿಗೆ ಸೂಕ್ತ ರೀತಿಯಲ್ಲಿ ಆದಷ್ಟು ಬೇಗ ಕಾನೂನು ಅಡಿಯಲ್ಲಿ ಶಿಕ್ಷೆಯಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಇಸ್ಲಾಂ ಧರ್ಮ ಹಾಗೂ ಪ್ರವಾದಿ ಅವರಿಗೆ ಅವಮಾನ ಮಾಡಿರುವುದಕ್ಕೆ ಸೇಡು ತೀರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ ದುಷ್ಕರ್ಮಿಗಳು ವಿಡಿಯೋ ಸಹ ಹರಿಬಿಟ್ಟಿದ್ದರು. ಹೀಗಾಗಿ ಉದಯಪುರದಲ್ಲಿ ಹಿಂಸಾಚಾರ ಭುಗಿಲೆದಿದ್ದು ಕರ್ಫ್ಯೂ ಜಾರಿ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!