ಸ್ಯಾಂಡಲ್ ವುಡ್ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ ಹಾಗೂ ಕಿಚ್ಚ ಕ್ರಿಯೇಷನ್ ಮೇಲಿನ ಪ್ರಕರಣವನ್ನ ಹೈಕೋರ್ಟ್ ವಜಾಗೊಳಿಸಿದೆ. ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ದೀಪಕ ಮಯೂರ ಪಟೇಲ ಎಂಬುವರು, ನಟ ಸುದೀಪ ನಿರ್ಮಾಣದ ವಾರಸ್ದಾರ ಧಾರವಾಹಿ ವಿರುದ್ಧ ದೂರು ದಾಖಲಿಸಿದ್ರು.
ವಾರಸ್ದಾರ ಸೀರಿಯಲ್ ಶೂಟಿಂಗ್ ಟೈಂನಲ್ಲಿ ನಮ್ಮ ಮನೆಯಲ್ಲಿ ಸಾಕಷ್ಟು ನಷ್ಟ ಮಾಡಿದ್ದಾರೆ ಎಂದು ದೀಪಕ ಕೇಸ್ ದಾಖಲಿಸಿದ್ರು. ಹೀಗಾಗಿ ಚಿಕ್ಕಮಗಳೂರಿನ 2ನೇ ಹೆಚ್ಚುವರಿ ನ್ಯಾಯಾಲಯ ನಟ ಸುದೀಪಗೆ ವಾರೆಂಟ್ ನೀಡಿತ್ತು. ಇದನ್ನ ಪ್ರಶ್ನಿಸಿ ನಟ ಸುದೀಪ ಹೈಕೋರ್ಟ್ ಗೆ ಹೋಗಿದ್ರು. ಸುದೀಪ ಪರ ವಕೀಲ ಗೋಪಿನಾಥ ವಾದ ಮಂಡಿಸಿದ್ರು.
ಈ ಕೇಸಿನಲ್ಲಿ ಸುದೀಪರನ್ನ ಖುಲಾಸೆಗೊಳಿಸಿದ ಕೋರ್ಟ್ ಪ್ರಕರಣವನ್ನ ವಜಾಗೊಳಿಸಿದೆ. ಈ ಬಗ್ಗೆ ಮಾತ್ನಾಡಿದ ಸುದೀಪ ಪರ ವಕೀಲರಾದ ಗೋಪಿನಾಥ, ದೀಪಕ ಮಯೂರ ಪಟೇಲ, ಬೇರೆ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದ್ರು. ಅದನ್ನ ನಮ್ಮಿಂದ ಪಡೆಯಲು ಈ ರೀತಿ ಮಾಡಿದ್ರು. ಅದು ಸಾಧ್ಯವಾಗಿಲ್ಲ. ಈ ಕೇಸಿನಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಹೈಕೋರ್ಟ್ ಅರ್ಜಿಯನ್ನ ವಜಾಗೊಳಿಸಿದೆ ಅಂತಾ ತಿಳಿಸಿದ್ರು.
ವಾರಸ್ದಾರ ಸೀರಿಯಲ್ ನ್ನ ಗಡ್ಡಾ ವಿಜಿ ನಿರ್ದೇಶನ ಮಾಡ್ತಿದ್ರು. ನಟಿ ಯಜ್ಞಾ ಶೆಟ್ಟಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ರು. ಬಳಿಕ ಈ ಧಾರವಾಹಿ ಮುಂದುವರೆಯಲಿಲ್ಲ.