ಬೆಂಗಳೂರು: ಫೆಬ್ರವರಿ 11 ರ ಸಂಜೆ ಸುಮಾರು 7.40ರ ಟೈಂನಲ್ಲಿ ರೌಡಿ ಪ್ರಭಾಕರನನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪಶ್ಚಿಮ ವಿಭಾಗದ ಕಾಟನ್ ಪೇಟೆ ಪೊಲೀಸ್ರು 6 ಜನ ಹಂತಕರನ್ನ ಅರೆಸ್ಟ್ ಮಾಡಿದ್ದಾರೆ.
ಜಾಲಿ ಮೊಹಲ್ಲಾ ನಿವಾಸಿಗಳಾದ 28 ವರ್ಷದ ಶಿವ, 23 ವರ್ಷದ ಅಜಯ, 22 ವರ್ಷದ ವಿನೋದ, 27 ವರ್ಷದ ಸುನೀಲ, 43 ವರ್ಷದ ಮಾಲ ಹಾಗೂ ಭಕ್ಷಿ ಗಾರ್ಡನ್ ನಿವಾಸಿ 22 ವರ್ಷದ ದೀಪಕನನ್ನು ಬಂಧಿಸಲಾಗಿದೆ. ಆರೋಪಿ ದೀಪಕನ ಅಕ್ಕನಿಗೆ 28 ವರ್ಷದ ರೌಡಿ ಪ್ರಭಾಕರ ಲೈಂಗಿಕ ಕಿರುಕುಳ ಕೊಡ್ತಿದ್ದ. ದೀಪಕ ತಾಯಿ ಮನೆ ಕಟ್ಟಿಸ್ತಿರುವ ವಿಚಾರದಲ್ಲಿಯೂ ಜಗಳ ಮಾಡಿದ್ದ. ನಾನು ಕೊಲೆ ಕೇಸಿನಲ್ಲಿ ಜೈಲಿಗೆ ಹೋಗಲು ನಿನ್ನ ಮಗ ಕಾರಣ. ಈ ಮನೆ ಕಂಪ್ಲೀಟ್ ಮಾಡಬೇಕು ಅಂದರೆ ನನ್ಗೆ 40 ಸಾವಿರ ರೂಪಾಯಿ ಕೊಡಬೇಕು ಎಂದು ಆವಾಜ್ ಹಾಕಿದ್ದನಂತೆ.
ಹೀಗೆ ಅಕ್ಕ ಮತ್ತು ತಾಯಿಗೆ ಕಿರುಕುಳ ಕೊಡ್ತಿದ್ದ ಪ್ರಭಾಕರನ ವಿಷಯ ತಿಳಿದ ಮಗ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಕೊಲೆಯ ಪ್ಲಾನ್ ಮಾಡಿ, ಫೆಬ್ರವರಿ 11 ರಂದು ರೌಡಿ ಪ್ರಭಾಕರನನ್ನು ಮುಗಿಸಿದ್ದ. ಬಂಧಿತ ಆರೋಪಿಗಳಿಂದ ಮಚ್ಚು, ಲಾಂಗು ಹಾಗೂ ಡ್ರ್ಯಾಗರ್ ವಶಕ್ಕೆ ಪಡೆಯಲಾಗಿದೆ.