ವೀರಗಾಸೆ, ಕಂಸಾಳೆ ಕಲಾವಿದರಿಗೆ ಮಾಸಾಶನಕ್ಕೆ ಆಗ್ರಹ

282

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇದೀಗ ರಾಜ್ಯದಲ್ಲಿ ಚಲನಚಿತ್ರಗಳ ನಡುವಿನ ವಾದ-ವಿವಾದ ಜೋರಾಗಿದೆ. ಇದರ ನಡುವೆ ಸರ್ಕಾರಕ್ಕೆ ಮತ್ತೊಂದು ರೀತಿಯ ಸಂಕಷ್ಟ ಎದುರಾಗಿದೆ. ಅದೇನು ಅಂದರೆ, ಕಾಂತಾರ ಸಿನಿಮಾದ ಬಳಿಕ ದೈವ ನರ್ತಕರಿಗೆ ಮಾಸಾಶನವನ್ನು ಸರ್ಕಾರ ಘೋಷಿಸಿದೆ. ಈಗ ವೀರಗಾಸೆ ಹಾಗೂ ಕಂಸಾಳೆ ಕಲಾವಿದರಿಗೂ ಮಾಸಾಶನಕ್ಕೆ ಆಗ್ರಹ ವ್ಯಕ್ತವಾಗುತ್ತಿದೆ.

ಜಾನಪದ ಪರಂಪರೆಗಳಲ್ಲಿ ವೀರಗಾಸೆ, ಕಂಸಾಳೆಯೂ ಒಂದು. ಒಂದು ಭಾಗದ ಜನರಿಗೆ ಮಾತ್ರ ಮಾಸಾಶನ ನೀಡಿದರೆ ಹೇಗೆ ನಮಗೂ ನೀಡಿ ಅನ್ನೋ ಕೂಗು ಎದ್ದಿದೆ. ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕಲಾವಿದರ ಬಳಕೆ ನಂತರ ಈ ಕೂಗು ಮತ್ತಷ್ಟು ಜೋರಾಗಿದೆ. ವಿವಾದದ ನಡುವೆ ಮಾಸಾಶನಕ್ಕೆ ವೀರಗಾಸೆ ಹಾಗೂ ಕಂಸಾಳೆ ಕಲಾವಿದರು ಸರ್ಕಾರವನ್ನು ಆಗ್ರಹಿಸಿದ್ದು, ಸರ್ಕಾರದ ನಡೆ ಏನು ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!