ವಿಜಯಪುರ ಬಸ್ ಗಳಲ್ಲಿ ಸಾಮಾಜಿಕ ಅಂತರ ಮಾಯ

408

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿದೆ. 30 ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದ್ರೂ, ಕೆಎಸ್ಆರ್ ಟಿಸಿ ಸಿಬ್ಬಂದಿ 50 ಜನರ ಮೇಲೆ ಕರೆದುಕೊಂಡು ಹೊರಟಿದ್ದಾರೆ.

ಗರಿಷ್ಟ ಮೂವತ್ತು ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕೆಂಬ ನಿಯಮ ಉಲ್ಲಂಘಿಸಿ ಎಲ್ಲ ಸೀಟ್ ಗಳಲ್ಲಿಯೂ ಪ್ರಯಾಣಿಕರನ್ನು ಕೂಡಿಸಲಾಲಾಗ್ತಿದೆ. ವಿಜಯಪುರ ನಗರದಿಂದ ಕನಮಡಿ ಗ್ರಾಮಕ್ಕೆ 50 ಕ್ಕೂ ಹೆಚ್ಚು ಪ್ರಯಾಣಿಕರು ಒಂದೇ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ.

ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿ ತಿಕೋಟಾ ತಾಲೂಕಿನ ಕನಮಡಿ ಗ್ರಾಮಕ್ಕೆ ಪ್ರಯಾಣಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗ್ತಿದೆ. ಆದ್ರೆ, ಮೇಲಾಧಿಕಾರಿಗಳ ನಿರ್ದೇಶಕದ ಮೇರೆಗೆ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ನೀಡಿದ್ದಾಗಿ ಬಸ್‌ ನಿರ್ವಾಹಕ ಕೋಲಾರ ಎಂಬುವರು ಹೇಳ್ತಿದ್ದಾರೆ. ಇದು ಬರೀ ಇದೊಂದು ಬಸ್ ಮಾತ್ರವಲ್ಲ ಜಿಲ್ಲೆಯ ಬಹುತೇಕ ಬಸ್ ಗಳಲ್ಲಿ ನಿಯಮವನ್ನ ಗಾಳಿಗೆ ತೂರಲಾಗಿದೆ. ಈ ಮೂಲಕ ಮತ್ತಷ್ಟು ಅಪಾಯಕ್ಕೆ ಸಾರಿಗೆ ಇಲಾಖೆ ಜನರನ್ನ ದೂಡ್ತಿದೆ.




Leave a Reply

Your email address will not be published. Required fields are marked *

error: Content is protected !!