ಕಲಬುರಗಿ: ಗೆಳೆಯರ ಜೊತೆ ಈಜಲು ಹೋದ ಯುವಕನೊಬ್ಬ ಕಲ್ಲುಕಣಿಯಲ್ಲಿ ಬಿದ್ದು ಸಾವನ್ನಪ್ಪಿದ್ದ ದುರ್ಘಟನೆ ನಡೆದಿದೆ. ಇದ್ಕಿಂತ ದುರಂತ ಅಂದ್ರೆ, ಸ್ನೇಹಿತ ಮುಳುಗುವುದನ್ನ ದಡದ ಮೇಲೆ ನಿಂತು ವಿಡಿಯೋ ಮಾಡಿರೋದು.
ಮುಜಗುರಿ ಪ್ರದೇಶದ 22 ವರ್ಷದ ಜಾಫರ ಐಯೂಬ ಮೃತ ದುರ್ದೈವಿ. ಈತನನ್ನು ಕಾಪಾಡುವ ಬದ್ಲು ದಡದ ಮೇಲೆ ನಿಂತು ಸ್ನೇಹಿತನೊಬ್ಬ ವಿಡಿಯೋ ಮಾಡಿದ್ದಾನೆ. ಮತ್ತೊಬ್ಬ ಸುಮ್ಮನೆ ನಿಂತು ನೋಡ್ತಿದ್ದಾನೆ. ಅದ್ಹೇಗೋ ಐಯೂಬ ದಡಕ್ಕೆ ಬಂದು ಸಹಾಯಕ್ಕೆ ಕೇಳಿಕೊಂಡಿದ್ದಾನೆ. ಆದ್ರೆ, ಸ್ನೇಹಿತರು ನಿರ್ಲಕ್ಷ್ಯ ಮಾಡಿದ್ರು. ಇದ್ರಿಂದಾಗಿ ಆತ ಜಲ ಸಮಾಧಿಯಾಗಿದ್ದಾನೆ.
ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನ ಹೊರ ತೆಗೆದಿದ್ದಾರೆ. ಕೆಲ ಮೂಲಗಳ ಪ್ರಕಾರ ಜಾಫರ ಅಯೂಬ ಸುಮ್ಮನೆ ತಮಾಷೆ ಮಾಡ್ತಿದ್ದಾನೆ ಅಂದ್ಕೊಂಡು ಹಾಗೆ ಬಿಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.