ಹುಣಶ್ಯಾಳ ಕೆರೆಯಲ್ಲಿ ಕಾಲುಜಾರಿ ಬಿದ್ದು ಬಾಲಕ ಸಾವು

784

ಸಿಂದಗಿ: ದೇವರಹಿಪ್ಪರಗಿ ಮತಕ್ಷೇತ್ರದ ಹುಣಶ್ಯಾಳ ಗ್ರಾಮದ ಅಬ್ದುಲಗಣಿ ಮೈಬುಸಾಬ ನಾಗಾವಿ ಅನ್ನೋ 12 ವರ್ಷದ ಬಾಲಕ ಕೆರೆಯಲ್ಲಿ ಕಾಲುಜಾರಿಬಿದ್ದು ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿನ್ನೆ ಸಂಜೆ ತಂದೆಯೊಂದಿಗೆ ಮೀನು ಹಿಡಿಯಲು ಹೋದಾಗ ಕಾಲು ಜಾರಿ ಬಿದ್ದ ಮೃತಪಟ್ಟದ್ದಾನೆ.

ಇಂದು ಸ್ಥಳಕ್ಕೆ ಮೀನುಗಾರಿಕೆ ಇಲಾಖೆ ಅಧಿಕಾರಿ ಶ್ರೀಶೈಲ ಗಂಗನಹಳ್ಳಿ, ಸಿಂದಗಿ ಎಪಿಎಂಸಿ ಅಧ್ಯಕ್ಷ ಹಳ್ಳೆಪ್ಪಗೌಡ ಚೌದ್ರಿ, ಕಲಕೇರಿ ಜಿಲ್ಲಾ ಪಂಚಾಯತ ಸದಸ್ಯೆ ಕಲ್ಲವ್ವ ಬುಳ್ಳಾ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ರು. ಈ ಬಗ್ಗೆ ಶಾಸಕರ ಜೊತೆ ಮಾತ್ನಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮೃತ ಬಾಲಕನ ಕುಟುಂಬ ತಿಳಿಸಿದ್ದಾರೆ.

ಇದೇ ವೇಳೆ ಅಹ್ಮದಸಾಬ ಜಾಡಗಾರ, ಅಲ್ಲಣ್ಣ ಬಡೇಗರ, ಡಿ.ಕೆ ಬಡೇಗರ, ಪ್ರಕಾಶ ಪಡಶೆಟ್ಟಿ, ಬಶೀರ ಸಿಪಾಯಿ, ಬಾಬು ವಸ್ತಾದಿ, ಗುತ್ತಪ್ಪಗೌಡ ಕೊಟಿಖಾನಿ, ಹುಸೇನ್ ನಾಗಾವಿ, ಅಮೀನಸಾಬ ಬಡೇಗರ ಸ್ಥಳದಲ್ಲಿದ್ರು.




Leave a Reply

Your email address will not be published. Required fields are marked *

error: Content is protected !!