ಬೆಂಗಳೂರು: ಇಡೀ ದೇಶ ಲಾಕ್ ಡೌನ್ ಎದುರಿಸ್ತಿದೆ. ಇದರ ನಡುವೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವಲಸೆ ಕಾರ್ಮಿಕರಿಗೆ ಊರಿಗೆ ಹೋಗಲು ಅವಕಾಶ ನೀಡಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ ಎಸ್ ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಕೂಲಿ ಕೆಲಸಕ್ಕಾಗಿ, ಜೀವನೋಪಯಕ್ಕಾಗಿ ಸ್ವಂತ ಊರು ತೊರೆದು ಪರ ಊರಿಗೆ ಕೆಲಸಕ್ಕೆ ಹೋಗಿರ್ತಾರೆ. ಇವರೆಲ್ಲ ಲಾಕ್ ಡೌನ್ ನಿಂದಾಗಿ ಪರ ಊರುಗಳಲ್ಲೇ ಸಿಕ್ಕು ಒದ್ದಾಡ್ತಿದ್ದಾರೆ. ಹೀಗಾಗಿ ಅವರಿಗೆ ವಾಪಸ್ ಊರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸಾರಿಗೆ ವ್ಯವಸ್ಥೆ ಮೂಲಕ ಸೂಕ್ತವಾಗಿ ಅವರಿಗೆ ಊರಿಗೆ ಹೋಗಲು ಅವಕಾಶ ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.