ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ಅಂದ್ರೆ ಸಾಕು ಅವರ ಅಭಿಮಾನಿಗಳು ಹೆಚ್ಚುದ್ದು ಕುಣಿತಾರೆ. ಕೋಟ್ಯಾಂತರ ಅಭಿಮಾನಿ ಬಳಗವನ್ನ ಹೊಂದಿರುವ ಮಲ್ಲ, ಇನ್ಮುಂದೆ ಡಾಕ್ಟರ್ ರವಿಚಂದ್ರನ್ ಆಗಲಿದ್ದಾರೆ. ಇದೇನು ರವಿಮಾಮನ ಹೊಸ ಸಿನ್ಮಾದ ಹೆಸರು ಅಂತಾ ಕೇಳ್ಬೇಡಿ. ಯಾಕಂದ್ರೆ ಇದು ಗೌರವ ಡಾಕ್ಟರೇಟ್.
ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾಲಯ ನಟ, ನಿರ್ದೇಶಕ, ನಿರ್ಮಾಪಕ ವಿ.ರವಿಚಂದ್ರನ್ ಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸ್ತಿದೆ. ನವೆಂಬರ್ 3ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಗೌರವಿಸಲಾಗ್ತಿದೆ. ಈ ವೇಳೆ ಡಿಸಿಎಂ ಡಾ.ಸಿ.ಎನ್ ಅಶ್ವಥನಾರಾಯಣ, ಡಿಆರ್ ಡಿಒ ಅಧ್ಯಕ್ಷ ಡಾ.ಜಿ ಸತೀಶ ರೆಡ್ಡಿ, ಸಿಎಂಆರ್ ಗ್ರೂಪ್ ಛೇರ್ಮನ್ ಕೆ.ಸಿ ರಾಮಮೂರ್ತಿ, ಕುಲಪತಿ ಸಬಿತಾ ರಾಮಮೂರ್ತಿ ಭಾಗವಹಿಸಲಿದ್ದಾರೆ.