ಪ್ರಜಾಸ್ತ್ರ ಸುದ್ದಿ
ನವದೆಹಲಿ: ಆಮ್ ಆದ್ಮಿ ಪಕ್ಷದ ವತಿಯಿಂದ ರಾಮ ನವಮಿಯ ದಿನವಾದ ಗುರುವಾರ ‘ಆಪ್ ಕಾ ರಾಮರಾಜ್ಯ’ ಎನ್ನುವ ಹೆಸರಿನ ವೆಬ್ ಸೈಟ್ ಬಿಡುಗಡೆ ಮಾಡಿದೆ. ಸಚಿವೆ ಅತಿಶಿ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಮುಖಂಡರಾದ ಸೌರಭ ಭಾರದ್ವಾಜ್, ಜಾಸ್ಮಿನ್ ಶಾ ಮುಂದಾಳತ್ವದಲ್ಲಿ ವೆಬ್ ಸೈಟ್ ಲಾಂಚ್ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಂಜಯ್ ಸಿಂಗ್, ಆಪ್ ಮಾಡಿದ ಕೆಲಸಗಳನ್ನು, ರಾಮರಾಜ್ಯ ಪರಿಕಲ್ಪನೆಯನ್ನು ವೆಬ್ ಸೈಟ್ ನಲ್ಲಿ ತಿಳಿಸಲಾಗುತ್ತೆ. ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳಿಸಲು ಕಳೆದ 10 ವರ್ಷಗಳಿಂದ ಕೇಜ್ರಿವಾಲ್ ಕೆಲಸ ಮಾಡಿದ್ದಾರೆ ಎಂದರು.
ಆಧಾರ ಇಲ್ಲದೆ, ಸುಳ್ಳು ಸಾಕ್ಷಿಗಳ ಮೂಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.