ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು: ಅಯೋಧ್ಯ ರಾಮ ಮಂದಿರ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನ ಹಾಗೂ ಮಗನೆ ಎಂದು ಅಗೌರವಾಗಿ ಮಾತನಾಡಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಅಂತಾ ಮಾಜಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ.
ಮಂಗಳವಾರ ಹಿರೇಮಗಳೂರು ಕೋದಂಡ ರಾಮಚಂದ್ರ ದೇವಸ್ಥಾನದಲ್ಲಿ ಸ್ವಚ್ಛತಾ ಕೆಲಸದ ವೇಳೆ ಮಾತನಾಡಿದರು. ರಾಮ ಎಂದರೆ ಎಲ್ಲರನ್ನೂ ಕೂಡಿಸಿಕೊಂಡು ಹೋಗುವನು. ಅನಂತರಕುಮಾರ್ ಹೆಗಡೆ ಕಾರ್ಯಶೈಲಿ ಭಿನ್ನವಾಗಿದೆ. ಹಾಗೆಂದು ಮತ್ತೊಬ್ಬರಿಗೆ ನೋವು ತರುವ ಹೇಳಿಕೆ ನೀಡಬಾರದು. ಹಿರಿಯರು ಮತ್ತು ಸ್ಥಾನಕ್ಕೆ ಗೌರವ ಕೊಡಬೇಕು ಅಂತಾ ಹೇಳಿದರು.
ಎಲ್ಲ ಮುಸ್ಲಿಂರನ್ನು ಒಂದೇ ತಕ್ಕಡಿಯಲ್ಲಿ ಹಾಕುವುದಿಲ್ಲ. ಘಜ್ನಿ, ಘೋರಿ, ಬಾಬರ ಮನಸ್ಥಿತಿಯಿಂದ ಹೊರ ಬರಬೇಕು. ಸಂತ ಶಿಶುನಾಳ ಶರೀಫ್, ಅಬ್ದುಲ್ ಕಲಾಂ ಮುಸ್ಲಿಂರಿಗೆ ಆದರ್ಶವಾಗಬೇಕು. ಹೀಗಾಗಿ ದಾಳಿಕೋರರ ಜೊತೆಗೆ ಗುರುತಿಸಿಕೊಳ್ಳುವ ಮುಸ್ಲಿಂರನ್ನು ನಾವು ಸಹಿಸುವುದಿಲ್ಲ ಎಂದರು.