ಮುಂಬೈ: ಮಹಿಳಾ ವಿಶ್ವಕಪ್ ಟಿ-20 ಟೂರ್ನಿಯಲ್ಲಿ ರನ್ನರ್ ಅಪ್ ಆದ ಭಾರತ ತಂಡ ಸ್ವದೇಶಕ್ಕೆ ಬಂದಿಳಿದಿದೆ. ಆದ್ರೆ, ಮಹಿಳಾ ತಂಡವನ್ನ ಸ್ವಾಗತಿಸಲು ಯಾರೂ ಬಾರದೆ ಇರೋದು ನಿಜಕ್ಕೂ ದುರಂತ. ಪುರುಷ ತಂಡ ಫೈನಲ್ ಗೆ ಹೋದ್ರೆ ಸಾಕು, ಅವರನ್ನ ಮೆರೆಸುವ ಈ ನೆಲದಲ್ಲಿ, ಮೊದಲ ಬಾರಿಗೆ ಫೈನಲ್ ಗೆ ಹೋಗಿ ರನ್ನರ್ ಅಪ್ ಆದ ತಂಡವನ್ನ ಸ್ವಾಗತಿಸದೆ ಇರೋದು ದುರಂತ.
ಹರ್ಮನ ಪ್ರೀತಿ ಕೌರ್ ನೇತೃತ್ವದ ತಂಡ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮವಾಗಿ ಆಡಿದೆ. ಫೈನಲ್ ನಲ್ಲಿ ಒಂದಿಷ್ಟು ಯಡವಟ್ಟು ಮಾಡಿಕೊಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಮೊದಲ ಬಾರಿಗೆ ಇಂತಹ ಸಾಧನೆ ಮಾಡಿರುವ ತಂಡ ಸ್ವದೇಶಕ್ಕೆ ಮರಳಿದಾಗ ಬಿಸಿಸಿಐನ ಯಾವುದೇ ಅಧಿಕಾರಿಗಳು ಸ್ವಾಗತ ಮಾಡದೇ ಇರೋದು ವಿಪರ್ಯಾಸವಾಗಿದೆ. ಅಲ್ದೇ, ಬಿಸಿಸಿಐ ಇದುವರೆಗೂ ಬಹುಮಾನ ಘೋಷಿಸದೆ ಇರೋದು ನೋವಿನ ಸಂಗತಿಯಾಗಿದೆ.