ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡಿಸುವ ಯಾತ್ರೆಯು ಕರ್ನಾಟಕದಲ್ಲಿ 2ನೇ ದಿನ ಭರ್ಜರಿಯಾಗಿ ಮುಂದುವರೆದಿದೆ. ಶನಿವಾರ ಯುವಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಇದಕ್ಕೆ ಕಾರಣ, ಯುವಕ ಧರಿಸಿರುವ ಟೀ ಶರ್ಟ್.
ಹೌದು, ವಿಜಯಪುರ ಮೂಲದ ಅಕ್ಷಯ್ ಕುಮಾರ್ ಅನ್ನೋ ಯುವಕ ಪೇ ಸಿಎಂ ಅನ್ನೋ ಪೋಸ್ಟರ್ ಹೊಂದಿದ ಟೀ ಶರ್ಟ್ ಧರಿಸಿದ್ದಾನೆ.ಇದಕ್ಕಾಗಿ ಕಿರಣ್ ಎಂಬುವರು ಚಾಮರಾಜನಗರ ಸನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಂದು ಗುಂಡ್ಲುಪೇಟೆ ತಾಲೂಕಿನ ಬೇಗೂರು ಹತ್ತಿರ ಯುವಕನನ್ನು ಬಂಧಿಸಿದ್ದಾರೆ. ಅಲ್ಲದೇ ಎಸ್ಪಿ ಟಿ.ಪಿ ಶಶಿಕುಮಾರ್ ಹಾಗೂ ಕಾನ್ಸ್ ಟೇಬಲ್ ಯುವಕನಿಗೆ ಥಳಿಸಿದ್ದು, ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಮಾನವ ಹಕ್ಕು ಚ್ಯುತಿ ಜೊತೆಗೆ ಸಾರ್ವಜನಿಕರು ಪ್ರತಿಭಟನೆ ಮಾಡುವ ಹಕ್ಕನ್ನು ಕಸೆದುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.