ಪ್ರಜಾಸ್ತ್ರ ಸುದ್ದಿ
ಮಸ್ಕಿ: ಇನ್ನು 5 ದಿನಗಳಲ್ಲಿ ಹಸೆಮಣೆ ಏರಬೇಕಾಗಿದ್ದವಳು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಜೊತೆಗೆ ಇಬ್ಬರು ಸ್ನೇಹಿತರು ಸಹ ಮೃತಪಟ್ಟಿದ್ದಾರೆ. ಸಿಂಧನೂರು ತಾಲೂಕಿನ ಅಡವಿಭಾವಿಯ ವಧು ರಜಿಯಾ ಬೇಗಂ ಹಾಗೂ ಸ್ನೇಹಿತರದಾದ ಅರುಣಾಕ್ಷಿ ಹಾಗೂ ವೀರೇಶ ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ.
ರಜಿಯಾ ಬೇಗಂ ಹಾಗೂ ಸಿರವಾರ ತಾಲೂಕಿನ ಮಾಡಗಿರಿಯ ಮೊಯಿನುದ್ದಿನ ಮದುವೆ ಜನವರಿ 24ಕ್ಕೆ ನಿಶ್ಚಿಯವಾಗಿತ್ತು. ಹೀಗಾಗಿ ಕುಟುಂಬಸ್ಥರು ಬಂಧು ಮಿತ್ರರಿಗೆ ಆಮಂತ್ರಣ ಪತ್ರ ಕೊಡುವ ಸಂಭ್ರಮದಲ್ಲಿದ್ದರು. ಅದೆ ರೀತಿ ರಜಿಯಾ ಬೇಗಂ ಸಹ ಮದುವೆ ಕಾರ್ಡ್ ಕೊಡಲು ಹೋಗುತ್ತಿದ್ದ ಸಂದರ್ಭದಲ್ಲಿ ಮಸ್ಕಿ ಪಟ್ಟಣದ ಬಸ್ ಡಿಪೋ ಬಳಿಯ ವಿದ್ಯುತ್ ಕಂಬಕ್ಕೆ ಬೈಕ್ ಗುದ್ದಿದೆ. ಇದ್ರಿಂದಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವೇಗವಾಗಿ ಬೈಕ್ ಚಲಾಯಿಸ್ತಿದ್ದ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಇದರ ಪರಿಣಾಮ 5 ದಿನಗಳಲ್ಲಿ ಮದುವೆಯಾಗಿದ್ದ ಯುವತಿ ಹಾಗೂ ಸ್ನೇಹಿತರಿಬ್ಬರು ಪ್ರಾಣ ಕಳೆದುಕೊಂಡಿದ್ದು ಮೂರು ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.