ಮಾ.11ರಂದು ಸಿಂದಗಿಗೆ ವಿಜಯ ಸಂಕಲ್ಪ ಯಾತ್ರೆ

121

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮಾರ್ಚ್ 11ರಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪಟ್ಟಣಕ್ಕೆ ಆಗಮಿಸಲಿದ್ದು, ಮುಂಜಾನೆ 10.30ಕ್ಕೆ ಬಸವೇಶ್ವರ ಸರ್ಕಲ್ ನಿಂದ ಯಾತ್ರೆ ಪ್ರಾರಂಭವಾಗಲಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು. ಪಕ್ಷದ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವೇಶ್ವರ ವೃತ್ತದಿಂದ ಯಾತ್ರೆ ಶುರುವಾಗಿ ವಿವೇಕಾನಂದ ಸರ್ಕಲ್, ಟಿಪ್ಪು ಸುಲ್ತಾನ್ ಸರ್ಕಲ್ ಮಾರ್ಗವಾಗಿ ಅಂಬೇಡ್ಕರ್ ಸರ್ಕಲ್ ತಲುಪಲಿದೆ ಎಂದರು.

ಯಾತ್ರೆಯಲ್ಲಿ ಕೇಂದ್ರ ನಾಯಕ ಕಿಶನ್ ರೆಡ್ಡಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಸಚಿವರಾದ ನಿರಾಣಿ, ಕಾರಜೋಳ, ಸಿ.ಸಿ ಪಾಟೀಲ, ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ, ಶಿವರಾಂ ಹೆಬ್ಬಾರ್, ಶಾಸಕರಾದ ರಮೇಶ ಜಾರಕಿಹೊಳಿ, ಪಿ.ರಾಜೀವ್, ಮಹೇಶ್ ಟೆಂಗಿನಕಾಯಿ ಸೇರಿದಂತೆ ಜಿಲ್ಲೆಯ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ ಅಂತಾ ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಡಿ ಕುಂಬಾರ ಮಾತನಾಡಿ, ಮಾರ್ಚ್ 2ರಿಂದ ನಂದಗಡದಿಂದ ಯಾತ್ರೆ ಪ್ರಾರಂಭವಾಗಿದೆ. ನಾಲ್ಕು ಭಾಗಗಳಲ್ಲಿ ಯಾತ್ರೆ ನಡೆಯುತ್ತಿದೆ. ಸಿಂದಗಿ ನಂತರ ದೇವರ ಹಿಪ್ಪರಗಿ, ಮುದ್ದೇಬಿಹಾಳದತ್ತ ಸಾಗಲಿದೆ ಎಂದರು. ಈ ವೇಳೆ ರಾಜಶೇಖರ ಪೂಜಾರಿ, ಸಿದ್ರಾಮ ದೇಶಪಾಂಡೆ, ಅರವಿಂದ ಕನ್ನೂರ, ಚಂದ್ರಶೇಖರ ಅಮಲಿಹಾಳ, ಬಿ.ಎಸ್ ಬಿರಾದಾರ, ಸಿದ್ದು ಪಾಟೀಲ, ಶಿವಕುಮಾರ ಬಿರಾದಾರ ಸೇರಿ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!