ವಿಜಯಪುರ: ಕಳ್ಳಭಟ್ಟಿ ತಯಾರಿಕೆ ಅಡ್ಡೆ ಮೇಲೆ ವಿಜಯಪುರ ಪೊಲೀಸರು ದಾಳಿ ನಡೆಸಿದ್ದಾರೆ. ಬಳಿಕ ಬ್ಯಾರಲ್ ನಲ್ಲಿದ್ದ ಕಳ್ಳಭಟ್ಟಿಯನ್ನ ನಾಶ ಪಡಿಸಲಾಗಿದೆ.
ವಿಜಯಪುರ ನಗರದ ಹರಣ ಶಿಕಾರಿ ಕಾಲೋನಿಯಲ್ಲಿನ ಮನೆಯೊಂದರ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ಇಲ್ಲಿ ಸಿಕ್ಕ ಸುಮಾರು 2 ಸಾವಿರಕ್ಕೂ ಹೆಚ್ಚು ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನ ನಾಶಪಡಿಸಲಾಗಿದೆ. ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.