ದೇಶಿ ಸಂತ್ರಾ ಸಾರಾಯಿ ಮಾರಾಟ: ಓರ್ವನ ಬಂಧನ

523

ಅಥಣಿ: ಕರೋನ ಹಿನ್ನೆಲೆಯಲ್ಲಿ ಸಾರಾಯಿ  ಅಂಗಡಿಗಳು ಬಂದ್ ಆಗಿದ್ದರಿಂದ ನೆರೆಯ ಮಹಾರಾಷ್ಟ್ರದಿಂದ ದೇಶಿ ಸಂತ್ರಾ ಸಾರಾಯಿ ಬಾಟಲ್‌ ಗಳನ್ನ ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಪೊಲೀಸ್ರು ದಾಳಿ ಮಾಡಿ ಓರ್ವನನ್ನ ಬಂಧಿಸಿದ್ದಾರೆ.

ತಾಲೂಕಿನ ತೀರ್ಥ ಗ್ರಾಮದ ಸಾರಾಯಿ ಅಡ್ಡೆ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು 7.74 ಲೀಟರ್ ಸಾರಾಯಿ ವಶಪಡಿಸಿಕೊಂಡು ಮಂಜುನಾಥ ಗಸ್ತಿ ಎಂಬುವನನ್ನ ಬಂಧಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಬಕಾರಿ ವಲಯ ಉಪ ನಿರೀಕ್ಷಕ ಬಸವರಾಜ ಮುಡಶಿ, ನಿರೀಕ್ಷಕ ಮಹೇಶ ಧೂಳಶೆಟ್ಟಿ, ಉಪನಿರೀಕ್ಷಕ ಸಂಜಯಕುಮಾರ ಅಸ್ಕಿ, ಸಿಬ್ಬಂದಿ ಎಸ್.ಎಸ್.ತಳವಾರ, ಮೋಹನ ಕಾಂಬಳೆ, ಬಾಹುಬಲಿ ಸನದಿ, ಸತೀಶ ನಾಯಕ, ಡಿ.ಎ.ಮುಲ್ಲಾ ದಾಳಿಯಲ್ಲಿ ಪಾಲ್ಗೊಂಡಿದ್ದರು.




Leave a Reply

Your email address will not be published. Required fields are marked *

error: Content is protected !!