ಸಂಪುಟ ಸರ್ಜರಿ: ಮಂತ್ರಿ ಮಂಡಲ ಸೇರುವ ಸಂಭಾವ್ಯರು ಇವರು

461

ಬೆಂಗಳೂರು: ಉಪ ಚುನಾವಣೆಯ ಫಲಿತಾಂಶ ಬಂದು ಒಂದು ತಿಂಗಳ ಮೇಲಾಗಿದೆ. ಇನ್ನು ಸಚಿವ ಸಂಪುಟ ವಿಸ್ತರಣೆ ಮಾತ್ರ ಆಗ್ತಿಲ್ಲ ಅನ್ನೋ ಟೆನ್ಷನ್ ನೂತನ ಶಾಸಕರಿಗಾಗಿದೆ. ಹೀಗಾಗಿ ಬಿಎಸ್ವೈ ಅವರನ್ನ ಹೋದಲ್ಲಿ ಬಂದಲ್ಲಿ ಸಂಪುಟ ಸರ್ಜರಿ ಯಾವಾಗ ಅಂತಾ ಕೇಳ್ತಾನೆ ಇದ್ದಾರೆ. ಅದಕ್ಕೆ ಅವರು ಒಂದೊಂದು ಸಬೂಬು ಹೇಳಿಕೊಂಡು ಬಂದಿದ್ರು. ಇದೀಗ ಅದಕ್ಕೆ ಮುಹೂರ್ತ ಫಿಕ್ಸ್ ಆಗಿದೆಯಂತೆ.

ಬುಧವಾರ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳಲಾಗ್ತಿದೆ. ಹೀಗಾಗಿ ನಾಳೆ ಸಂಜೆ ನವದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಸಿಎಂ ಬಿಎಸ್ವೈ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ ಬುಧವಾರ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗದೇ ಹೋದ್ರೆ ದೆಹಲಿ ಎಲೆಕ್ಷನ್ ಮುಗಿದ್ಮೇಲೆ ಎನ್ನಲಾಗ್ತಿದೆ.

ಸಂಭಾವ್ಯರ ಲಿಸ್ಟ್ ಇಲ್ಲಿದೆ..

ಉಮೇಶ ಕತ್ತಿ, ಮಹೇಶ ಪಾಟೀಲ, ಆನಂದ ಸಿಂಗ್, ಬಿ.ಸಿ ಪಾಟೀಲ, ರಮೇಶ ಜಾರಕಿಹೊಳಿ, ಎಸ್.ಟಿ ಸೋಮಶೇಖರ, ಕೆ.ಗೋಪಾಲಯ್ಯ, ಡಾ.ಕೆ ಸುಧಾಕರ, ಕೆ.ಸಿ ನಾರಾಯಣಗೌಡ, ಭೈರತಿ ಬಸವರಾಜ, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜುಗೌಡ ನಾಯಕ, ಎಸ್.ಅಂಗಾರ, ಹಾಲಪ್ಪ ಆಚಾರ ಹಾಗೂ ಅರವಿಂದ ಲಿಂಬಾವಳಿ ಹೆಸರು ಸಚಿವ ಸಂಪುಟ ವಿಸ್ತರಣೆಯಲ್ಲಿ ಸೇಪರ್ಡೆಗೊಳ್ಳುವವರ ಲಿಸ್ಟ್ ನಲ್ಲಿವೆ.




Leave a Reply

Your email address will not be published. Required fields are marked *

error: Content is protected !!