ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ
ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ವಿಕ್ರಂ, ಪ್ರಜ್ಞಾನ್ ಓಡಾಡಿದ ಬಳಿಕ ನಿದ್ರಾವಸ್ಥೆಗೆ ಹೋಗಿದ್ದವು. ನಾಳೆಯಿಂದ ಮತ್ತೆ ಬೆಳಕು ಕಾಣಿಸಲಿದೆ. ಹೀಗಾಗಿ ವಿಕ್ರಂ, ಪ್ರಜ್ಞಾನ್ ಗೆ ಮರು ಜೀವ ಬರಲಿದೆ.
ಮೊದಲ ಕಿರಣ ಬಿದ್ದ ಕ್ಷಣದಿಂದ ಕೆಲಸ ಮರು ಪ್ರಾರಂಭಿಸಲಿವೆ. ಚಂದ್ರನ ಅಂಗಳದಲ್ಲಿ ಭೂಮಿಗಿಂತ ಹಗಲು ಹಾಗೂ ರಾತ್ರಿಗೆ 14 ದಿನಗಳ ಅಂತರವಿದೆ. ಹೀಗಾಗಿ ಈ ಸಾಧನಗಳನ್ನು ಹಂತ ಹಂತವಾಗಿ ನಿದ್ರಾವಸ್ಥೆಗೆ ಕಳಿಸಲಾಗಿತ್ತು. ಸೆಪ್ಟೆಂಬರ್ 22ರಿಂದ ಮರುಜೀವ ಬರಲಿದೆ.