ಪ್ರಜಾಸ್ತ್ರ ಸುದ್ದಿ
ತುಮಕೂರು: ಕಾಂಗ್ರೆಸ್ ಮಾಜಿ ಶಾಸಕ ಎನ್.ರಾಜಣ್ಣ ಬಿಜೆಪಿ ಮೂವರು ಸಚಿವರಿಗೆ ಕಿಮ್ಮತ್ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಯಡಿಯೂರಪ್ಪ ಮಗನಿಂದಲೇ ಇಲ್ಲಿ ಬಿಜೆಪಿ ನೆಲೆ ಬಂದಿದೆ ಎಂದು ಹೊಗಳುತ್ತಾರೆ. ಹಾಗಾದ್ರೆ, ಗೋವಿಂದ ಕಾರಜೋಳ, ಆರ್.ಅಶೋಕ, ಶ್ರೀರಾಮುಲು ಅವರಿಗೆ ಕಿಮ್ಮತ್ ಇಲ್ವೆ ಎಂದಿದ್ದಾರೆ.
ತಳಸಮುದಾಯದ ನಾಯಕರು ಬಂದು ಇಲ್ಲಿ ಓಡಾಡುತ್ತಿದ್ದಾರೆ. ಆದ್ರೆ, ಯಡಿಯೂರಪ್ಪ ಮಗನನ್ನ ಹೊಗಳುತ್ತಿದ್ದಾರೆ. ಇವರಿಗೆ ಮರ್ಯಾದೆ ಇದ್ಯಾ? ತಳಸಮುದಾಯದ ನಾಯಕರನ್ನೇ ಮುಖ್ಯಮಂತ್ರಿ ಅವಮಾನ ಮಾಡ್ತಿದ್ದಾರೆ ಎಂದು ಮಾಜಿ ಶಾಸಕ ಎನ್.ರಾಜಣ್ಣ ಕಿಡಿ ಕಾರಿದ್ದಾರೆ.