ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ದಲಿತ ಸ್ವಾಮೀಜಿಯೊಬ್ಬರ ಅಂಜಲು ತಿನ್ನುವ ಮೂಲಕ ಸುದ್ದಿಯಾಗಿದ್ದಾರೆ. ಅಂಬೇಡ್ಕರ್ ಜಯಂತಿ ಹಾಗೂ ಈದ್ ಮಿಲಾದ್ ಪ್ರಯುಕ್ತ ಬಿಬಿಎಂಪಿಯಿಂದ ಇಂದು ಆಹಾರ ವಿತರಣೆ ಮಾಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಜಮೀರ್ ಅಹ್ಮದ್ ದಲಿತ ಸ್ವಾಮೀಜಿಯೊಬ್ಬರಿಗೆ ಆಹಾರ ತಿನ್ನಿಸಿ, ಅವರ ಎಂಜಲನ್ನು ತಿಂದಿದ್ದಾರೆ.
ಹೀಗೆ ಎಂಜಲು ತಿಂದ ಜಮೀರ್ ಅಹ್ಮದ್, ಅಸ್ಪೃಶ್ಯತೆ ಬೇಡ. ದಲಿತರು ಎಂದು ದೂರ ಇಡಬಾರದು. ನಮ್ಮ ನಡುವೆ ಜಾತಿ, ಧರ್ಮ ಎಂದಿಗೂ ಅಡ್ಡ ಬರಬಾರದು. ಮನುಷ್ಯನಾಗಿ ಬಾಳುವುದೆ ನಿಜವಾದ ಧರ್ಮ ಎಂದಿದ್ದಾರೆ.