ಉಡುಪಿ: ಕ್ವಾರಂಟೈನಲ್ಲಿದ್ದ 54 ವರ್ಷದ ವ್ಯಕ್ತಿ ಮೇ 14ರಂದು ಸಾವನ್ನಪ್ಪಿದ್ರು. ಅವರ ಕೋವಿಡ್ ವರದಿ ಬಂದಿದ್ದು, ಸೋಂಕು ಇರುವುದು ಪತ್ತೆಯಾಗಿದೆ. ಈ ಸಾವಿನೊಂದಿಗೆ ಉಡುಪಿಯಲ್ಲಿ ಮೊದಲ ಕರೋನಾ ಸಾವು ಆಗಿದೆ.
ಮಹಾರಾಷ್ಟ್ರದಿಂದ ಕುಂದಾಪುರಕ್ಕೆ ಮೇ 13ರಂದು ಬಂದಿದ್ರು. ಬಳಿಕ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ರು. ನೋವು ಹೆಚ್ಚಾದ ಪರಿಣಾಮ ಮಣಿಪಾಲನ ಕೆಎಂಸಿಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಮೇ 14ರಂದು ಸಾವನ್ನಪ್ಪಿದ್ರು.
ಇದೀಗ ಈ ವ್ಯಕ್ತಿಯ ಸಾವು ಕರೋನಾದಿಂದಾಗಿ ಅನ್ನೋದು ತಿಳಿದು ಬಂದಿದೆ. ಹೀಗಾಗಿ ಚಿಕಿತ್ಸೆ ಟೈಂನಲ್ಲಿ ರೋಗಿಯ ಸಂಪರ್ಕಕ್ಕೆ ಬಂದಿದ್ದ ವೈದ್ಯಕೀಯ ಸಿಬ್ಬಂದಿಯನ್ನ ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ.
ಇನ್ನು ರಾಜ್ಯದಲ್ಲಿಂದು 16 ಜನ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 14, ವಿಜಯಪುರ ಹಾಗೂ ಕಲಬುರಗಿಯಲ್ಲಿ ತಲಾ ಒಬ್ಬರು ಸೋಂಕಿತರು ಬಿಡುಗಡೆಯಾಗಿದ್ದಾರೆ.