ಇಂಡಿಯನ್ ಕ್ರಿಕೆಟ್ ಟೀಂನ ಮಾಜಿ ಕ್ಯಾಪ್ಟನ್, ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಕರೋನಾ ವಿಚಾರದಲ್ಲಿ ಮಾಡಿರುವ ಸಹಾಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಅತ್ಯಂತ ಕೂಲ್ ಹಾಗೂ ಸೌಮ್ಯ ಸ್ವಭಾವದ ಆಟಗಾರನೆಂದು ಕರೆಸಿಕೊಳ್ಳುವ ಧೋನಿ ವಾರ್ಷಿಕವಾಗಿ ಗಳಿಸುವುದು ಬರೋಬ್ಬರಿ 800 ಕೋಟಿ.
ಅವರ ಜಾಹೀರಾತು ಬ್ರ್ಯಾಂಡ್ ಮೌಲ್ಯ ಸೇರಿದಂತೆ ವರ್ಷಕ್ಕೆ ನೂರಾರು ಕೋಟಿ ಗಳಿಸುವ ಧೋನಿ ಪುಣೆಯ ದೈನಂದಿನ ಕೂಲಿ ಕಾರ್ಮಿಕರಿಗೆ 1 ಲಕ್ಷ ರೂಪಾಯಿ ಸಹಾಯ ಮಾಡಿದ್ದಾರೆ. ಇದು ಅತ್ಯಂತ ವಿಷಾದಾಕರವೆಂದು ಅವರ ಫ್ಯಾನ್ಸ್ ಹೇಳ್ತಿದ್ದಾರೆ. ವರ್ಷಕ್ಕೆ ನೂರಾರು ಕೋಟಿ ಗಳಿಸುವ ಆಟಗಾರನೊಬ್ಬ 1 ಲಕ್ಷ ರೂಪಾಯಿ ಸಹಾಯ ಬೇಸರ ಮೂಡಿಸಿದೆ ಎಂದಿದ್ದಾರೆ.
ಸೌರವ ಗಂಗೂಲಿ 50 ಲಕ್ಷ ರೂಪಾಯಿ ಅಕ್ಕಿ ನೀಡಿದ್ದಾರೆ. ಸಚಿನ ತಂಡೂಲ್ಕರ್ ಮಹಾರಾಷ್ಟ್ರ ಸರ್ಕಾರಕ್ಕೆ ಹಾಗೂ ಪ್ರಧಾನಿ ಪರಿಹಾರ ನಿಧಿಗೆ ತಲಾ 25 ಲಕ್ಷ ನೀಡಿದ್ದಾರೆ. ಸಹೋದರರಾದ ಯೂಸಫ, ಇರ್ಫಾನ ಪಠಾಣ್ ಸಹ ಅಗತ್ಯ ನೆರವು ನೀಡಿದ್ದಾರೆ.