ಬೆಂಗಳೂರು: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಊಟ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕರೋನಾದಿಂದ ಇಡೀ ದೇಶ ಲಾಕ್ ಡೌನ್ ಆಗಿದೆ. ಹೀಗಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ಯಾಕೇಟ್ ರೂಪದಲ್ಲಿ ಆಹಾರವನ್ನ ಬಡವರಿಗೆ ತಲುಪಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಪುರಸಭೆ ವ್ಯಾಪ್ತಿಯಲ್ಲಿ ಮನೆ ಮನೆಗೆ ದಿನಸಿ ಕೊಡಲು ಸಹ ಇಂದು ನಿರ್ಧರಿಸಲಾಗಿದೆ. ಈ ಮೂಲಕ ಸೋಷಿಯಲ್ ಡಿಸ್ಟನ್ಸ್ ಕಾಪಾಡಿಕೊಳ್ಳುವಂತೆ ಕ್ರಮ ತೆಗೆದುಕೊಳ್ಳಲಾಗ್ತಿದೆ.
ಸಭೆಯಲ್ಲಿ ಸಾಮಾಜಿಕ ಅಂತರ:
ಇಂದು ಕರೆಯಲಾದ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಯ್ತು. ಮೊದಲ ಬಾರಿಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಲಾಯ್ತು. ಇದುವರೆಗೂ ಸಂಪುಟ ಸಭಾಂಣದಲ್ಲಿ ಸಭೆ ನಡೆಸಲಾಗ್ತಿತ್ತು. ಪ್ರಧಾನಿ ಮೋದಿ ಬುಧವಾರ ನಡೆಸಿದ ಸಭೆಯ ರೀತಿಯಲ್ಲೇ ಸಿಎಂ ಬಿಎಸ್ವೈ ಸಾಮಾಜಿಕ ಅಂತರ ಕಾಯ್ದುಕೊಳ್ಳವ ಮೂಲಕ ಸಭೆ ನಡೆಸಿದ್ದಾರೆ.