Search

ಅನಧಿಕೃತ ಡಬ್ಬಾ ಅಂಗಡಿಗಳ ತೆರವು

750

ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 1ರ ವತಿಯಿಂದ ಧಾರವಾಡದ ಜಯನಗರ, ಉದಯ ಹಾಸ್ಟೆಲ್ ಹಾಗೂ ವಿವೇಕಾನಂದ ವೃತ್ತದಲ್ಲಿನ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು. ಸಂಜೆ ವೇಳೆಗೆ ಕಾರ್ಯಾಚರಣೆ ಕೈಗೊಂಡ ಪಾಲಿಕೆ ಸಿಬ್ಬಂದಿ ರಸ್ತೆಯ ಬದಿಯಲ್ಲಿ ಅನಧಿಕೃತವಾದ 12ಕ್ಕೂ ಹೆಚ್ಚು ಡಬ್ಬಾ ಅಂಗಡಿಗಳನ್ನ ತೆರವುಗೊಳಿಸಿದರು.

ಕೆಸಿಡಿ ಬಳಿಯ ಉದಯ ಹಾಸ್ಟೆಲ್ ಮಾರ್ಗದಿಂದ ಆರಂಭವಾದ ತೆರವು ಕಾರ್ಯಾಚರಣೆ ನಂತರ ವಿವೇಕಾನಂದ ವೃತ್ತ ಹಾಗೂ ಜಯನಗರದ ಪ್ರಮುಖ ರಸ್ತೆಯಲ್ಲಿ ನಡೆಯಿತು. ಪಾಲಿಕೆ ವಲಯ ಕಚೇರಿ 1ರ ಅಧಿಕಾರಿ ಎಂ.ಬಿ.ಸಬರದ ನೇತೃತ್ವದಲ್ಲಿ, ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಈ ತೆರವು ಕಾರ್ಯಾಚರಣೆಯ ನಡೆಯಿತು.

ಈ ವೇಳೆ ಮಾತ್ನಾಡಿದ ವಲಯ ಅಧಿಕಾರಿ ಸಬರದ, ವಲಯ ಕಚೇರಿ 1ರ ವ್ಯಾಪ್ತಿಯ ರಸ್ತೆಯ ಬದಿ ಪುಟ್ ಪಾತ್ ಅತಿಕ್ರಮಿಸಿಕೊಂಡಿರುವ ಡಬ್ಬಾ ಅಂಗಡಿಗಳನ್ನು ಅವುಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿ,‌ ಪಾದಚಾರಿಗಳ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದ್ರು. ಇಲ್ಲದೇ ಹೋದರೆ ಪಾಲಿಕೆಯಿಂದ ಕಾರ್ಯಾಚರಣೆ ನಡೆಸಿ ತರೆವುಗೊಳಿಸಲಾಗುವುದು ಅಂತಾ ಎಚ್ಚರಿಸಿದ್ದಾರೆ. ಡಬ್ಬಾ ಅಂಗಡಿ ತೆರವು ಕಾರ್ಯಾಚರಣೆ ವೇಳೆ ಆರೋಗ್ಯಾಧಿಕಾರಿ ಬಿರಾದರ ಹಾಗೂ ಪದ್ಮಾವತಿ ಮದುಕೇಶ್ವರ ಇದ್ದರು.




Leave a Reply

Your email address will not be published. Required fields are marked *

error: Content is protected !!