ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ತಂಡವೊಂದು ಸರ್ಕಾರ ಬೀಳಿಸಲು ಯತ್ನಿಸುತ್ತಿದೆ ಅನ್ನೋ ವಿಚಾರದ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನಮಗೆ ಎಲ್ಲಾ ಗೊತ್ತಿದೆ. ನನಗೆ, ಸಿಎಂಗೆ ಸಂಬಂಧಪಟ್ಟವರೆ ಮಾಹಿತಿ ಕೊಡುತ್ತಿದ್ದಾರೆ. ಯಾರಿಗೆ ಏನ್ ಆಫರ್ ಕೊಡುತ್ತಿದ್ದಾರೆ ಗೊತ್ತು ಎಂದು ಹೇಳಿದರು.
ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಯಾವ ಶಾಸಕರನ್ನು ಯಾರು ಭೇಟಿ ಮಾಡುತ್ತಿದ್ದಾರೆ. ಯಾವಾಗ, ಎಲ್ಲಿ ಅನ್ನೋದು ಗೊತ್ತಿದೆ. ನಮಗೆ ಪ್ರತಿಯೊಂದರ ಮಾಹಿತಿ ಅಧಿವೇಶನದ ಸಂದರ್ಭದಲ್ಲಿ ಹೇಳುತ್ತೇವೆ. ಈ ಬಗ್ಗೆ ಈಗ ನಾನು ಹೆಚ್ಚಿಗೆ ಏನೂ ಮಾತನಾಡುವುದಿಲ್ಲ. ಬಿಜೆಪಿ, ಜೆಡಿಎಸ್ ನವರಿಗೆ ಹತಾಶೆ ಹೆಚ್ಚಾಗಿದೆ. ವೈದ್ಯರು ಇದಕ್ಕೆ ಮೇಜರ್ ಆಪರೇಷನ್ ಮಾಡಬೇಕು ಎಂದು ವ್ಯಂಗ್ಯವಾಡಿದರು.