ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲೋಕಸಭಾ ಚುನಾವಣೆ-2024ರ ತಯಾರಿಯಲ್ಲಿ ರಾಜಕೀಯ ಪಕ್ಷಗಳು ತೊಡಗಿಕೊಂಡಿವೆ. ಒಂದು ಕಡೆ ವಿಪಕ್ಷಗಳ ಪಡೆ. ಮತ್ತೊಂದು ಕಡೆ ಆಡಳಿತರೂಢ ಪಕ್ಷಗಳ ಪಡೆ. ಮಂಗಳವಾರ ಎರಡೂ ಕಡೆ ಸಭೆಗಳು ನಡೆದಿವೆ. ವಿಪಕ್ಷಗಳ ತಂಡದಲ್ಲಿರುವ ಆಮ್ ಆದ್ಮಿ, ಎನ್ ಡಿಎ ಪಡೆಯನ್ನು ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಆಪ್, ಡೋಂಗಿ ಬಾಬಾ ಮತ್ತು 38 ಕಳ್ಳರು ಎಂದು ಪೋಸ್ಟರ್ ಬಿಟ್ಟು, ಹಲವು ವಿಚಾರಗಳನ್ನಿಟ್ಟುಕೊಂಡು ಟೀಕಿಸಿದೆ. ಆಲಿಬಾಬಾ ಮತ್ತು ನಲ್ವತ್ತು ಕಳ್ಳರ ಕಥೆ ಕೇಳಿರಬಹುದು. ಇದು ಡೋಂಗಿ ಬಾಬಾ ಮತ್ತು 38 ಕಳ್ಳರ ಗುಂಪು ಎಂದು ಪ್ರಧಾನಿ ಮೋದಿ ಎಡಿಟ್ ಮಾಡಿ ಶೇರ್ ಮಾಡಿದೆ.