ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ವಿಪಕ್ಷಗಳು ಇಂದು ನಗರದಲ್ಲಿ ಸಭೆ ನಡೆಸಿದವು. ತಮ್ಮ ಈ ಪಡೆಗೆ INDIA ಎಂದು ನಾಮಕರಣ ಮಾಡಿದ್ದಾರೆ. ಅಂದರೆ, Indain National Democractic Inclusive Alliance ಎಂಬುವುದಾಗಿದೆ. ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
26 ಪಕ್ಷಗಳ ಈ ತಂಡದ ಮುಂದಾಳತ್ವ ವಹಿಸಿಕೊಳ್ಳಲು 11 ನಾಯಕರ ಸಮನ್ವಯ ಸಮಿತಿ ರಚಿಸಲಾಗಿದೆ. ಅವರು ನಾಯಕತ್ವದ ತೀರ್ಮಾನ ಮಾಡುತ್ತಾರೆ ಅಂತಾ ತಿಳಿಸಿದರು. ಒಟ್ಟಿಗೆ ಹೋರಾಡುವುದೇ ನಮ್ಮೆಲ್ಲರ ಉದ್ದೇಶ ಅಂತಾ ಹೇಳಿದರು.
ಇಂದಿನ ಸಭೆಯಲ್ಲಿ ಬೆಲೆ ಏರಿಕೆ, ಮಣಿಪುರ ಹಿಂಸಾಚಾರ, ನಿರುದ್ಯೋಗ ವಿಚಾರದ ಕುರಿತು ಹೆಚ್ಚಾಗಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.