ಪ್ರಜಾಸ್ತ್ರ ಸುದ್ದಿ
ಮಡಿಕೇರಿ: ನನ್ನ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆ. ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ಏನಾಗಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸಾತ್ಯಕಿ ಯಾರು? ಅವರಿಗೆ ಏನು ಗೊತ್ತಿದೆ. ಮೊದಲು ಜನರ ಬದುಕನ್ನು ಕಟ್ಟಲು ನೋಡಿ ಎಂದರು.
ಕೊಡಗಿನಲ್ಲಿ ಮೂರು ವರ್ಷದಿಂದ ಭೂಕುಸಿತದಿಂದಾಗಿ ಮನೆ, ಬೆಳೆ ಹಳಾಗಿದೆ. ಜನರಿಗೆ ಏನು ಕೊಟ್ಟಿದ್ದೀರಿ ಅದನ್ನು ಮೊದಲು ಹೇಳಿ. ಸಾವರ್ಕರ್ ಮಗನೋ, ಮೊಮ್ಮಗನೋ ಇಲ್ಲಿಗೆ ಬಂದು ನಮಗೆ ಬೋಧನೆ ಮಾಡುವುದು ಏನಿದೆ. ಬಿಜೆಪಿಯವರು ಎರಡು ಮುಖದವರು. ಎದುರಿಗೆ ಸಿಕ್ಕಾಗ ಒಂದು ರೀತಿ, ಒಳಗೆ ಇರುವ ನಡುವಳಿಕೆಯೇ ಬೇರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.